ಸಾಂಪ್ರದಾಯಿಕ ಸಂಸ್ಕೃತ ನಾಟಕಗಳಿಗಿಂತ ಭಿನ್ನ ಆಲೋಚನೆಯಲ್ಲಿ ನಾಟಕವನ್ನು ಬರೆಯುವ ಭಾಸನ ನಾಟಕಗಳಿಗೆ ಜೀವತುಂಬುತ್ತ, ನಮ್ಮ ನಡುವೆ ಇರುವ ಕ್ರಿಯಾ ವಿಧಿಗಳನ್ನೇ ಬಳಸಿಕೊಂಡು ಅವರದೇ ಆದ ಶೈಲಿಯಲ್ಲಿ ನಾಯರಿ ಅವರು ನಾಟಕ ಗಳನ್ನು ಕಟ್ಟುತ್ತಾ ಬಂದಿದ್ದಾರೆ. ಅವರ ವ್ಯಕ್ತಿತ್ವ, ಸೃಜನಶೀಲತೆ ಹಾಗೂ ಸ್ನೇಹ ಪರತೆ ಬಹಳ ವಿಶಿಷ್ಟವಾದುದು. ಅವರ ನಿಧನದಿಂದಾಗಿ ವಿಭಿನ್ನ ಶೈಲಿಯ ರಂಗ ನಿರ್ದೇಶಕನನ್ನು ಭಾರತೀಯ ರಂಗ ಭೂಮಿ ಕಳೆದುಕೊಂಡಿತು ಎಂದರು.