ಶಿರೂರು ಶ್ರೀಗಳ ದೇಹದಲ್ಲಿ ವಿಷದ ಅಂಶವಿದೆ ಎಂದು ಎಫ್ಎಸ್ಎಲ್ ವರದಿಯಲ್ಲಿ ಖಚಿತವಾದ ನಂತರ ಅಸ್ವಾಭಾವಿಕ ಸಾವಿನ ದೂರನ್ನು ಬದಲಾಯಿಸುವುದಾಗಿ ಪೊಲೀಸರು ಹೇಳುತ್ತಾರೆ. ಆದರೆ, ಇದು ಸರಿಯಾದ ಕ್ರಮವಲ್ಲ; ಅಪರಾಧ ನಡೆದಿದೆ ಎಂದು ದೂರು ದಾಖಲಾದರೆ ಮಾತ್ರ, ತನಿಖೆ ಸರಿಯಾಗಿ ಸಾಗಲು ಭೂಮಿಕೆ ಸಿದ್ಧಮಾಡಿದಂತಾಗುತ್ತದೆ ಎಂದು ಮುರ್ಡೇಶ್ವರ್ ಅಭಿಪ್ರಾಯಪಟ್ಟರು.