<p><strong>ಬ್ರಹ್ಮಾವರ:</strong> ಕುಂಜಾಲು ಹೆಬ್ರಿ ಮುಖ್ಯರಸ್ತೆ ಬದಿಯ ಹೇರೂರು ಕ್ರಾಸ್ ಬಳಿ ಇರುವ ಚಾಂತಾರು ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕದಿಂದ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ಕೃಷಿ ಕೇಂದ್ರದ ಯಕ್ಷಿಣಿ ನಗರದ ಎದುರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ವಾಸಿಸುವ ಪರಿಸರ ಇದಾಗಿದ್ದು, ಗ್ರಾ.ಪಂ. ತಾತ್ಕಾಲಿಕ ಒಣ ಕಸ ವಿಲೇವಾರಿಗೆ ಶೇಖರಣೆ ಮಾಡಿ ಇಟ್ಟಿದೆ. ಹತ್ತಿರದಲ್ಲೇ ಕುಡಿಯುವ ನೀರಿನ ಘಟಕ, ಓವರ್ ಹೆಡ್ ಟ್ಯಾಂಕ್, ಅಂಗನವಾಡಿ ಕೇಂದ್ರ, 2 ಬಸ್ ನಿಲ್ದಾಣಗಳಿವೆ. ಡೆಂಗಿ, ಮಲೇರಿಯದಂತಹ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.</p>.<p>ಈ ಬಗ್ಗೆ ಗ್ರಾಮಸ್ಥರು ಶಾಸಕ ಯಶಪಾಲ್ ಸುವರ್ಣ ಅವರಿಗೆ ಮನವಿ ಮಾಡಿದ್ದು, ಶಾಸಕರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಘಟಕವನ್ನು ಶೀಘ್ರ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.</p>.<p>ಸ್ಥಳೀಯ ಮುಖಂಡ ಆನಂದ, ಗ್ರಾ.ಪಂ. ಸದಸ್ಯರಾದ ನಿತ್ಯಾನಂದ ಪೂಜಾರಿ, ರೇವತಿ, ಸ್ಥಳೀಯರಾದ ಉದಯ ಕುಮಾರ್, ಜಯರಾಮ ನಾಯಕ್, ಅಶೋಕ ಕುಮಾರ್ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ:</strong> ಕುಂಜಾಲು ಹೆಬ್ರಿ ಮುಖ್ಯರಸ್ತೆ ಬದಿಯ ಹೇರೂರು ಕ್ರಾಸ್ ಬಳಿ ಇರುವ ಚಾಂತಾರು ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕದಿಂದ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ಕೃಷಿ ಕೇಂದ್ರದ ಯಕ್ಷಿಣಿ ನಗರದ ಎದುರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ವಾಸಿಸುವ ಪರಿಸರ ಇದಾಗಿದ್ದು, ಗ್ರಾ.ಪಂ. ತಾತ್ಕಾಲಿಕ ಒಣ ಕಸ ವಿಲೇವಾರಿಗೆ ಶೇಖರಣೆ ಮಾಡಿ ಇಟ್ಟಿದೆ. ಹತ್ತಿರದಲ್ಲೇ ಕುಡಿಯುವ ನೀರಿನ ಘಟಕ, ಓವರ್ ಹೆಡ್ ಟ್ಯಾಂಕ್, ಅಂಗನವಾಡಿ ಕೇಂದ್ರ, 2 ಬಸ್ ನಿಲ್ದಾಣಗಳಿವೆ. ಡೆಂಗಿ, ಮಲೇರಿಯದಂತಹ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.</p>.<p>ಈ ಬಗ್ಗೆ ಗ್ರಾಮಸ್ಥರು ಶಾಸಕ ಯಶಪಾಲ್ ಸುವರ್ಣ ಅವರಿಗೆ ಮನವಿ ಮಾಡಿದ್ದು, ಶಾಸಕರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಘಟಕವನ್ನು ಶೀಘ್ರ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.</p>.<p>ಸ್ಥಳೀಯ ಮುಖಂಡ ಆನಂದ, ಗ್ರಾ.ಪಂ. ಸದಸ್ಯರಾದ ನಿತ್ಯಾನಂದ ಪೂಜಾರಿ, ರೇವತಿ, ಸ್ಥಳೀಯರಾದ ಉದಯ ಕುಮಾರ್, ಜಯರಾಮ ನಾಯಕ್, ಅಶೋಕ ಕುಮಾರ್ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>