<p><strong>ಕುಂದಾಪುರ</strong>: ಈ ವರ್ಷದ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಅನುಪಮಾ ಪ್ರಸಾದ್ ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಗೆ ದೊರಕಿದೆ.</p>.<p>ಕನ್ನಡ ಸಾಹಿತ್ಯ ಲೋಕದಲ್ಲಿ ಕತೆಗಳ ಮೂಲಕ ಪ್ರಸಿದ್ಧರಾಗಿರುವ ಅನುಪಮಾ ಪ್ರಸಾದ್ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಪ್ರಮುಖ ಲೇಖಕರಾದ ಓ.ಎಲ್.ನಾಗಭೂಷಣ ಸ್ವಾಮಿ, ದೇವು ಪತ್ತಾರ್, ಮತ್ತು ನರೇಂದ್ರ ರೈ ದೇರ್ಲ ಅವರು ನಿರ್ಣಾಯಕರಾಗಿದ್ದರು. ಪ್ರಶಸ್ತಿಯು ₹ 15,000 ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.</p>.<p><strong>ಲೇಖಕರ ಪರಿಚಯ:</strong> ಉತ್ತರ ಕನ್ನಡ ಜಿಲ್ಲೆಯವರಾದ ಅನುಪಮಾ ಪ್ರಸಾದ್ ದಕ್ಷಿಣ ಕನ್ನಡದ ಉಜಿರೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಗಡಿನಾಡು ಕಾಸರಗೋಡಿನಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.</p>.<p>ಚೇತನಾ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ ಇವರ ಕಥಾ ಸಂಕಲನಗಳು. ಎಂ. ವ್ಯಾಸರ ಕುರಿತಾದ ಅರ್ಧ ಕಥಾನಕ’ ಇವರ ನಿರೂಪಣಾ ಕೃತಿ. ಕಿರುನಾಟಕಗಳು, ಬಿಡಿ ಕವಿತೆಗಳು ಮತ್ತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ಪಕ್ಕಿಹಳ್ಳದ ಹಾದಿಗುಂಟ ಇವರ ಮೊದಲ ಕಾದಂಬರಿ.</p>.<p>ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅತ್ಯತ್ತಮ ಕಥಾಸಂಕಲನ ಜೋಗತಿ ಜೋಳಿಗೆ ಕೃತಿಗೆ 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರಾವಳಿ ಲೇಖಕಿಯರ ಸಂಘದ ‘ಸಾರಾ ಅಬೂಬಕರ್’ ಪ್ರಶಸ್ತಿ ಮತ್ತು ಅಡ್ವೈಸರ್ ಪ್ರಶಸ್ತಿ ಸಂದಿದೆ.</p>.<p>ದೂರತೀರ ಕೃತಿಗೆ 2012ನೇ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ವಸುದೈವ ಭೂಪಾಲಂ’ ಕಥಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ‘ತ್ರಿವೇಣಿ’ ಪುರಸ್ಕಾರ ದೊರೆತಿದೆ. ಕರವೀರದ ಗಿಡ ಕೃತಿಗೆ 2010ನೇ ಸಾಲಿನ ಬೇಂದ್ರೆ ಗ್ರಂಥ ಬಹುಮಾನ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ</strong>: ಈ ವರ್ಷದ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಅನುಪಮಾ ಪ್ರಸಾದ್ ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಗೆ ದೊರಕಿದೆ.</p>.<p>ಕನ್ನಡ ಸಾಹಿತ್ಯ ಲೋಕದಲ್ಲಿ ಕತೆಗಳ ಮೂಲಕ ಪ್ರಸಿದ್ಧರಾಗಿರುವ ಅನುಪಮಾ ಪ್ರಸಾದ್ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಪ್ರಮುಖ ಲೇಖಕರಾದ ಓ.ಎಲ್.ನಾಗಭೂಷಣ ಸ್ವಾಮಿ, ದೇವು ಪತ್ತಾರ್, ಮತ್ತು ನರೇಂದ್ರ ರೈ ದೇರ್ಲ ಅವರು ನಿರ್ಣಾಯಕರಾಗಿದ್ದರು. ಪ್ರಶಸ್ತಿಯು ₹ 15,000 ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.</p>.<p><strong>ಲೇಖಕರ ಪರಿಚಯ:</strong> ಉತ್ತರ ಕನ್ನಡ ಜಿಲ್ಲೆಯವರಾದ ಅನುಪಮಾ ಪ್ರಸಾದ್ ದಕ್ಷಿಣ ಕನ್ನಡದ ಉಜಿರೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಗಡಿನಾಡು ಕಾಸರಗೋಡಿನಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.</p>.<p>ಚೇತನಾ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ ಇವರ ಕಥಾ ಸಂಕಲನಗಳು. ಎಂ. ವ್ಯಾಸರ ಕುರಿತಾದ ಅರ್ಧ ಕಥಾನಕ’ ಇವರ ನಿರೂಪಣಾ ಕೃತಿ. ಕಿರುನಾಟಕಗಳು, ಬಿಡಿ ಕವಿತೆಗಳು ಮತ್ತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ಪಕ್ಕಿಹಳ್ಳದ ಹಾದಿಗುಂಟ ಇವರ ಮೊದಲ ಕಾದಂಬರಿ.</p>.<p>ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅತ್ಯತ್ತಮ ಕಥಾಸಂಕಲನ ಜೋಗತಿ ಜೋಳಿಗೆ ಕೃತಿಗೆ 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರಾವಳಿ ಲೇಖಕಿಯರ ಸಂಘದ ‘ಸಾರಾ ಅಬೂಬಕರ್’ ಪ್ರಶಸ್ತಿ ಮತ್ತು ಅಡ್ವೈಸರ್ ಪ್ರಶಸ್ತಿ ಸಂದಿದೆ.</p>.<p>ದೂರತೀರ ಕೃತಿಗೆ 2012ನೇ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ವಸುದೈವ ಭೂಪಾಲಂ’ ಕಥಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ‘ತ್ರಿವೇಣಿ’ ಪುರಸ್ಕಾರ ದೊರೆತಿದೆ. ಕರವೀರದ ಗಿಡ ಕೃತಿಗೆ 2010ನೇ ಸಾಲಿನ ಬೇಂದ್ರೆ ಗ್ರಂಥ ಬಹುಮಾನ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>