<p><strong>ಕಾರ್ಕಳ</strong>: ಕುಕ್ಕುಂದೂರು ಗ್ರಾಮದಲ್ಲಿ ಖಾಸಗಿಯವರಿಗೆ ಸೇರಿದ ಕಟ್ಟಡವೊಂದರಲ್ಲಿ ಜೂಜು ಆಡುತ್ತಿದ್ದಾಗ ಪೋಲಿಸರು ದಾಳಿ ನಡೆಸಿ ಜುಗಾರಿಗೆ ಬಳಸಿದ ಸಾಮಗ್ರಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.</p>.<p>ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಮಂಗಳೂರಿನ ಅಪ್ರಿತ್, ನಿಶಾಂತ ಎಂಬುವರು ಜುಗಾರಿ ಆಡುತ್ತಿದ್ದಾಗ ನಗರ ಠಾಣೆಯ ಪಿಎಸ್ಐ ಮುರಳೀಧರ ನಾಯ್ಕ್, ಸಿಬ್ಬಂದಿ ದಾಳಿ ನಡೆಸಿದ್ದಾರೆ. ಆಟಕ್ಕೆ ಬಳಸಿದ ₹22,690 ನಗದು, 9 ಮೊಬೈಲ್, ಇತರ ಸಲಕರಣೆ ವಶಪಡಿಸಿಕೊಂಡಿದ್ದಾರೆ.</p><p>ಪ್ರಕರಣ ಆರೋಪಿ ಉಮ್ಮರ್ ಫಾರೂಕ್, ಅಬ್ದುಲ್ ಅಜೀಜ್, ಸತೀಶ ಎಸ್. ಪ್ರಭು, ಅಬ್ದುಲ್ ರಹಿಮಾನ್, ಸಮೀರ್, ಸುಲೇಮಾನ್, ಇರ್ಪಾನ್, ಚೇತಕ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರು ಆರೋಪಿಗಳು ಓಡಿ ಹೋಗಿದ್ದಾರೆ.</p>
<p><strong>ಕಾರ್ಕಳ</strong>: ಕುಕ್ಕುಂದೂರು ಗ್ರಾಮದಲ್ಲಿ ಖಾಸಗಿಯವರಿಗೆ ಸೇರಿದ ಕಟ್ಟಡವೊಂದರಲ್ಲಿ ಜೂಜು ಆಡುತ್ತಿದ್ದಾಗ ಪೋಲಿಸರು ದಾಳಿ ನಡೆಸಿ ಜುಗಾರಿಗೆ ಬಳಸಿದ ಸಾಮಗ್ರಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.</p>.<p>ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಮಂಗಳೂರಿನ ಅಪ್ರಿತ್, ನಿಶಾಂತ ಎಂಬುವರು ಜುಗಾರಿ ಆಡುತ್ತಿದ್ದಾಗ ನಗರ ಠಾಣೆಯ ಪಿಎಸ್ಐ ಮುರಳೀಧರ ನಾಯ್ಕ್, ಸಿಬ್ಬಂದಿ ದಾಳಿ ನಡೆಸಿದ್ದಾರೆ. ಆಟಕ್ಕೆ ಬಳಸಿದ ₹22,690 ನಗದು, 9 ಮೊಬೈಲ್, ಇತರ ಸಲಕರಣೆ ವಶಪಡಿಸಿಕೊಂಡಿದ್ದಾರೆ.</p><p>ಪ್ರಕರಣ ಆರೋಪಿ ಉಮ್ಮರ್ ಫಾರೂಕ್, ಅಬ್ದುಲ್ ಅಜೀಜ್, ಸತೀಶ ಎಸ್. ಪ್ರಭು, ಅಬ್ದುಲ್ ರಹಿಮಾನ್, ಸಮೀರ್, ಸುಲೇಮಾನ್, ಇರ್ಪಾನ್, ಚೇತಕ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರು ಆರೋಪಿಗಳು ಓಡಿ ಹೋಗಿದ್ದಾರೆ.</p>