<p><strong>ಉಡುಪಿ:</strong>ಸರ್ಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮಾತುಕತೆಯಾಗಿರುವುದು ಸತ್ಯ. ಆದರೆ, ಒಳ ಒಪ್ಪಂದದ ನಿಯಮ, ಷರತ್ತುಗಳು ಏನು ಎಂಬುದು ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ <a href="https://www.prajavani.net/tags/siddaramaiah" target="_blank">ಸಿದ್ದರಾಮಯ್ಯ</a> ಹೇಳಿದರು.</p>.<p>ಬುಧವಾರ ಉಡುಪಿಯ ಪುರಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಉಳಿಯಬೇಕಾದರೆ ಉಪ ಚುನಾವಣೆಯಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಬೇಕು. ವಿಫಲವಾದರೆ ಸರ್ಕಾರ ಬೀಳಲಿದೆ. ಈ ಸಂದರ್ಭ ಜೆಡಿಎಸ್ ಬೆಂಬಲ ಕೊಟ್ಟರೆ ಕೊಡಲಿ ಎಂದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/karnataka-politics-investigation-on-siddaramaiah-and-hd-kumaraswamy-tenure-scams-679810.html" target="_blank">ಸಿದ್ದರಾಮಯ್ಯ, ಎಚ್ಡಿಕೆ ಅವಧಿಯ ಅವ್ಯವಹಾರದ ಕುರಿತು ತನಿಖೆಗೆ ಆದೇಶ: ವಿ.ಸೋಮಣ್ಣ</a></p>.<p>ಜೆಡಿಎಸ್ ನಿಜವಾಗಿಯೂ ಜಾತ್ಯತೀತ ಪಕ್ಷವಾದರೆ ಬಿಜೆಪಿಗೆ ಖಂಡಿತ ಬೆಂಬಲ ನೀಡುವುದಿಲ್ಲ. ಕೊಟ್ಟರೆ, ಪಕ್ಷದ ಜಾತ್ಯತೀತತೆಯ ಬಣ್ಣ ಬಯಲಾಗಲಿದೆ ಎಂದು ಕುಟುಕಿದರು.</p>.<p>ಅನರ್ಹ ಶಾಸಕರ ರಾಜೀನಾಮೆ ವಿಚಾರದಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣವನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಕಾಂಗ್ರೆಸ್ಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong>ಸರ್ಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮಾತುಕತೆಯಾಗಿರುವುದು ಸತ್ಯ. ಆದರೆ, ಒಳ ಒಪ್ಪಂದದ ನಿಯಮ, ಷರತ್ತುಗಳು ಏನು ಎಂಬುದು ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ <a href="https://www.prajavani.net/tags/siddaramaiah" target="_blank">ಸಿದ್ದರಾಮಯ್ಯ</a> ಹೇಳಿದರು.</p>.<p>ಬುಧವಾರ ಉಡುಪಿಯ ಪುರಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಉಳಿಯಬೇಕಾದರೆ ಉಪ ಚುನಾವಣೆಯಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಬೇಕು. ವಿಫಲವಾದರೆ ಸರ್ಕಾರ ಬೀಳಲಿದೆ. ಈ ಸಂದರ್ಭ ಜೆಡಿಎಸ್ ಬೆಂಬಲ ಕೊಟ್ಟರೆ ಕೊಡಲಿ ಎಂದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/karnataka-politics-investigation-on-siddaramaiah-and-hd-kumaraswamy-tenure-scams-679810.html" target="_blank">ಸಿದ್ದರಾಮಯ್ಯ, ಎಚ್ಡಿಕೆ ಅವಧಿಯ ಅವ್ಯವಹಾರದ ಕುರಿತು ತನಿಖೆಗೆ ಆದೇಶ: ವಿ.ಸೋಮಣ್ಣ</a></p>.<p>ಜೆಡಿಎಸ್ ನಿಜವಾಗಿಯೂ ಜಾತ್ಯತೀತ ಪಕ್ಷವಾದರೆ ಬಿಜೆಪಿಗೆ ಖಂಡಿತ ಬೆಂಬಲ ನೀಡುವುದಿಲ್ಲ. ಕೊಟ್ಟರೆ, ಪಕ್ಷದ ಜಾತ್ಯತೀತತೆಯ ಬಣ್ಣ ಬಯಲಾಗಲಿದೆ ಎಂದು ಕುಟುಕಿದರು.</p>.<p>ಅನರ್ಹ ಶಾಸಕರ ರಾಜೀನಾಮೆ ವಿಚಾರದಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣವನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಕಾಂಗ್ರೆಸ್ಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>