ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕುಂದಾಪುರ ಡಿಪೊದಲ್ಲಿ ಇಕ್ಕಟ್ಟು !

Published : 31 ಜನವರಿ 2025, 7:44 IST
Last Updated : 31 ಜನವರಿ 2025, 7:44 IST
ಫಾಲೋ ಮಾಡಿ
Comments
ತುಂಬಿ ತುಳುಕುತ್ತಿರುವ ಕುಂದಾಪುರ ಡಿಪೊ ಜನರ ಬೇಡಿಕೆ ಈಡೇರಿಕೆ ವಿಫಲ ಆದಾಯವಿದ್ದರೂ, ವ್ಯವಸ್ಥೆ ಇಲ್ಲ; ವಿದ್ಯಾರ್ಥಿಗಳಿಗೆ ಸಮಸ್ಯೆ
ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಸಂಪರ್ಕ ವಿಸ್ತರಣೆಗೆ ಅಗತ್ಯವಾಗಿರುವ ಡಿಪೊ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು
ಗುರುರಾಜ್ ಗಂಟಿಹೊಳೆ ಶಾಸಕ ಬೈಂದೂರು.
ಬೈಂದೂರಿನಲ್ಲಿ ಡಿಪೊ ಆದಲ್ಲಿ ಕುಂದಾಪುರದ ಭಾರ ಕಡಿಮೆಯಾಗುವುದರ ಜೊತೆಗೆ ಇನ್ನಷ್ಟು ಜನರಿಗೆ ಸರ್ಕಾರಿ ಬಸ್ ಸೌಕರ್ಯ ದೊರೆಯಲಿದೆ. ಡಿಪೊ ನಿರ್ಮಾಣಕ್ಕಾಗಿ ಕನಿಷ್ಟ 5ಎಕರೆ ಜಾಗದ ಅವಶ್ಯಕತೆಯಿದ್ದು ಜಾಗ ದೊರಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಬಹುದು
ಉದಯ ಶೆಟ್ಟಿ ವ್ಯವಸ್ಥಾಪಕ ಕುಂದಾಪುರ ಡಿಪೊ
ನಾನು ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದ ವೇಳೆ ಬೈಂದೂರಿಗೆ ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ಅನುದಾನ ಮಂಜೂರಾತಿ ಆಗಿತ್ತು. ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಿಗೆ ಬೇಡಿಕೆಗೆ ಅನುಗುಣವಾಗಿ ಖಾಸಗಿಯವರ ವಿರೋಧವಿದ್ದರೂ ಸರ್ಕಾರಿ ಬಸ್‌ಗಳ ಓಡಾಟ ನಡೆಸಲಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ
ಕೆ.ಗೋಪಾಲ ಪೂಜಾರಿ ಮಾಜಿ ಶಾಸಕ ಬೈಂದೂರು.
ಬೈಂದೂರಿಗೆ ಬೇಕು ಡಿಪೊ
ಕೊಲ್ಲೂರು ಮರವಂತೆ ಮಾರಣಕಟ್ಟೆ ಸೋಮೇಶ್ವರ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವನ್ನು ಹೊಂದಿರುವ ಬೈಂದೂರಿನಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಡಿಪೊ ಪ್ರಾರಂಭಿಸಿದಲ್ಲಿ ಕುಂದಾಪುರ ಡಿಪೊದ ಒತ್ತಡ ಕಡಿಮೆಯಾಗಿ ಜನರ ಬೇಡಿಕೆಗಳಿಗೆ ಪರಿಹಾರ ದೊರೆತು ಸಂಸ್ಥೆಯ ಆದಾಯವೂ ಹೆಚ್ಚಾಗುತ್ತದೆ ಎನ್ನುವ ವ್ಯವಹಾರಿಕ ಲೆಕ್ಕಾಚಾರಗಳಿವೆ. ಮಂಗಳೂರು ವಿಭಾಗಕ್ಕೆ ಸೇರಿರುವ ಉಡುಪಿ ಜಿಲ್ಲೆಯಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ ಮಾತ್ರ ಡಿಪೊಗಳಿವೆ. ಬೈಂದೂರಿನಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಬಸ್‌ ನಿಲ್ದಾಣವಾಗಿದ್ದರೂ 6-7 ವರ್ಷಗಳಿಂದ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿತ್ತು. ಫೆಬ್ರವರಿ ತಿಂಗಳಲ್ಲಿ ಇದರ ಉದ್ಘಾಟನೆಯಾಗಲಿದೆ ಎನ್ನುವ ನಿರೀಕ್ಷೆಗಳಿವೆ. ನಿಲ್ದಾಣದಲ್ಲಿನ ಸ್ಟಾಲ್ ಹೋಟೆಲ್‌ಗಳಿಗೆ ಟೆಂಡರ್ ಕರೆದಿದೆ. ಬೆಳೆಯುತ್ತಿರುವ ಬೈಂದೂರಿನಲ್ಲಿ ಡಿಪೊ ಆದರೆ ಗ್ರಾಮಾಂತರ ಪ್ರದೇಶಗಳಿಗೆ ಇನ್ನಷ್ಟು ಸಾರಿಗೆ ಸೌಲಭ್ಯ ನೀಡಬಹುದು. ಕೊಲ್ಲೂರಿನಂತಹ ಧಾರ್ಮಿಕ ಕೇಂದ್ರವನ್ನು ಬೆಸೆಯಬಹುದು. ಕುಂದಾಪುರ ಡಿಪೊ ಮೇಲಿರುವ ಒತ್ತಡವೂ ಕಡಿಮೆಯಾಗಲಿದೆ ಎನ್ನುವ ಆಶಾವಾದಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT