ಚಿರತೆ ಹಾರಿದ ರಭಸಕ್ಕೆ ಕೆಳಗೆ ಬಿದ್ದು ಕೈ, ಕಾಲು ಮಂಡಿ ತರಚಿತು. ಕೆಲಹೊತ್ತು ಸ್ಥಳದಲ್ಲೇ ಸುಧಾರಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಪರಿಚಿತರೊಬ್ಬರು, ಚಿರತೆ ದಾಳಿಯ ಸುದ್ದಿ ತಿಳಿದು ಕುಂದಾಪುರ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು ಎಂದು ಪ್ರೇಮಾ ಮಾಹಿತಿ ನೀಡಿದರು.