ಕಾರ್ಕಳ (ಉಡುಪಿ ಜಿಲ್ಲೆ): ತಾಲ್ಲೂಕಿನ ಹೊಸ್ಮಾರು ಜಾಣಮನೆಯ ಬಳಿ ಸೋಮವಾರ ಸಿಡಿಲು ಬಡಿದು ವಿಜಿತ್ (38) ಎಂಬುವವರು ಮೃತಪಟ್ಟಿದ್ದಾರೆ. ಮನೆಯ ಆವರಣದಲ್ಲಿದ್ದಾಗ ಏಕಾಏಕಿ ಸಿಡಿಲು ಅಪ್ಪಳಿಸಿ ಮೃತಪಟ್ಟಿದ್ದಾರೆ.
ಮೃತ ವಿಜಿತ್ ನಾಬಿರಾಜ ಹೆಗ್ಡೆ ಅವರ ಪುತ್ರ. ಕುಂದಾಪುರ, ಹೆಬ್ರಿ ಸೇರಿದಂತೆ ಹಲವಡೆ ಸೋಮವಾರ ಸಂಜೆ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆ ಸುರಿದಿದ್ದು ಹಾನಿ ಸಂಭವಿಸಿದೆ.