<p><strong>ಕುಂದಾಪುರ:</strong> ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪತ್ನಿ ಅನುರಾಧಾ ಅವರೊಂದಿಗೆ ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.</p>.<p>ಪತ್ನಿ ಹಾಗೂ ಸೀಮಿತ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮನೆಗೆ ಬಂದ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೊರಗ ಸಮುದಾಯದವರು, ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಹೇಳಿಕೊಂಡು, ಸಾಂಪ್ರದಾಯಿಕ ವಾದ್ಯಗಳ ಪರಿಚಯ ಮಾಡಿಕೊಟ್ಟರು. </p>.<p>‘ವಿದ್ಯೆಯಿಂದ ಮಾತ್ರ ಸಮುದಾಯಗಳು ಬೆಳೆಯಲು ಸಾಧ್ಯ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಸಮಸ್ಯೆ ಹಾಗೂ ಸಂಕಷ್ಟ ಹೇಳಿಕೊಳ್ಳಲು ಹಿಂಜರಿಕೆ ಬೇಡ. ನೆರವಾಗಿ ನನಗೆ ತಿಳಿಸಿ, ನಾನು ನಿಮ್ಮ ಧ್ವನಿಯಾಗುತ್ತೇನೆ’ ಎಂದು ಶಾಸಕರು ತಿಳಿಸಿದರು.</p>.<p>ಹರ್ಕೂರು ಗ್ರಾಮದ ಕೊರಗ ಸಮಾಜದ ಸಾಮಾಜಿಕ ಪರಿಸ್ಥಿತಿ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಶಾಸಕರು, ಸಮಸ್ಯೆಗಳ ಪರಿಹಾರದ ಬಗ್ಗೆ ವಿಚಾರ ವಿನಿಮಯ ನಡೆಸಿದರು.</p>.<p>ಕೊರಗ ಸಮುದಾಯ ಸಮಾಜದ ಮುಖ್ಯ ವಾಹಿನಿಯಿಂದ ನಿರ್ಲಕ್ಷಿತವಾದ ಸಮಾಜವಾಗಿದೆ ಎನ್ನುವ ಭಾವನೆ ಇನ್ನೂ ಇದೆ. ಈ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತು ಸಮುದಾಯದ ಎಲ್ಲರನ್ನು ಸುಶಿಕ್ಷಿತರನ್ನಾಗಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಯತ್ನ ಮಾಡಬೇಕು ಎಂದರು.</p>.<p>ಶಾಸಕರ ಪತ್ನಿ ಅನುರಾಧಾ ಅವರೊಂದಿಗೆ ಕೊರಗ ಸಮುದಾಯದ ಸ್ಥಳೀಯ ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು.</p>.<p>ಶಿವರಾತ್ರಿಯ ಹಣಬು ಸುಡುವ ಆಚರಣೆ ಇದ್ದ ಕಾರಣಕ್ಕೆ ಸಸ್ಯಹಾರದ ಅಡುಗೆ ಮಾಡಲಾಗಿತ್ತು. ಸಂವಾದದ ಬಳಿಕ ಸಹ ಭೋಜನ ಮಾಡಿದ ಶಾಸಕ ಗಂಟಿಹೊಳೆ ಅವರು, ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. </p>.<p>ಸಾಮಾಜಿಕ ಕಾರ್ಯಕರ್ತ, ವಕೀಲರಾದ ಸತೀಶ್ ಕಾಳವರ್ಕರ್, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.</p>.<div><blockquote>ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಶೋಷಿತ ವರ್ಗಗಳ ನೋವು ಹಾಗೂ ಸಂಭ್ರಮವನ್ನು ಆಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ </blockquote><span class="attribution">ಗುರುರಾಜ್ ಗಂಟಿಹೊಳೆ. ಶಾಸಕ ಬೈಂದೂರು</span></div>
<p><strong>ಕುಂದಾಪುರ:</strong> ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪತ್ನಿ ಅನುರಾಧಾ ಅವರೊಂದಿಗೆ ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.</p>.<p>ಪತ್ನಿ ಹಾಗೂ ಸೀಮಿತ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮನೆಗೆ ಬಂದ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೊರಗ ಸಮುದಾಯದವರು, ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಹೇಳಿಕೊಂಡು, ಸಾಂಪ್ರದಾಯಿಕ ವಾದ್ಯಗಳ ಪರಿಚಯ ಮಾಡಿಕೊಟ್ಟರು. </p>.<p>‘ವಿದ್ಯೆಯಿಂದ ಮಾತ್ರ ಸಮುದಾಯಗಳು ಬೆಳೆಯಲು ಸಾಧ್ಯ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಸಮಸ್ಯೆ ಹಾಗೂ ಸಂಕಷ್ಟ ಹೇಳಿಕೊಳ್ಳಲು ಹಿಂಜರಿಕೆ ಬೇಡ. ನೆರವಾಗಿ ನನಗೆ ತಿಳಿಸಿ, ನಾನು ನಿಮ್ಮ ಧ್ವನಿಯಾಗುತ್ತೇನೆ’ ಎಂದು ಶಾಸಕರು ತಿಳಿಸಿದರು.</p>.<p>ಹರ್ಕೂರು ಗ್ರಾಮದ ಕೊರಗ ಸಮಾಜದ ಸಾಮಾಜಿಕ ಪರಿಸ್ಥಿತಿ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಶಾಸಕರು, ಸಮಸ್ಯೆಗಳ ಪರಿಹಾರದ ಬಗ್ಗೆ ವಿಚಾರ ವಿನಿಮಯ ನಡೆಸಿದರು.</p>.<p>ಕೊರಗ ಸಮುದಾಯ ಸಮಾಜದ ಮುಖ್ಯ ವಾಹಿನಿಯಿಂದ ನಿರ್ಲಕ್ಷಿತವಾದ ಸಮಾಜವಾಗಿದೆ ಎನ್ನುವ ಭಾವನೆ ಇನ್ನೂ ಇದೆ. ಈ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತು ಸಮುದಾಯದ ಎಲ್ಲರನ್ನು ಸುಶಿಕ್ಷಿತರನ್ನಾಗಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಯತ್ನ ಮಾಡಬೇಕು ಎಂದರು.</p>.<p>ಶಾಸಕರ ಪತ್ನಿ ಅನುರಾಧಾ ಅವರೊಂದಿಗೆ ಕೊರಗ ಸಮುದಾಯದ ಸ್ಥಳೀಯ ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು.</p>.<p>ಶಿವರಾತ್ರಿಯ ಹಣಬು ಸುಡುವ ಆಚರಣೆ ಇದ್ದ ಕಾರಣಕ್ಕೆ ಸಸ್ಯಹಾರದ ಅಡುಗೆ ಮಾಡಲಾಗಿತ್ತು. ಸಂವಾದದ ಬಳಿಕ ಸಹ ಭೋಜನ ಮಾಡಿದ ಶಾಸಕ ಗಂಟಿಹೊಳೆ ಅವರು, ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. </p>.<p>ಸಾಮಾಜಿಕ ಕಾರ್ಯಕರ್ತ, ವಕೀಲರಾದ ಸತೀಶ್ ಕಾಳವರ್ಕರ್, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.</p>.<div><blockquote>ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಶೋಷಿತ ವರ್ಗಗಳ ನೋವು ಹಾಗೂ ಸಂಭ್ರಮವನ್ನು ಆಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ </blockquote><span class="attribution">ಗುರುರಾಜ್ ಗಂಟಿಹೊಳೆ. ಶಾಸಕ ಬೈಂದೂರು</span></div>