ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಯಲ್ಲಿರುವ ಚೆಕ್ಪೋಸ್ಟ್ನಲ್ಲಿ ಉದ್ಯೋಗಕ್ಕೆ ತೆರಳುವವರು ಹೊರತುಪಡಿಸಿ ಇತರರು ಪಾಸ್ ಇಲ್ಲದೆ ಉಡುಪಿಯಿಂದ ಮಂಗಳೂರು ಕಡೆಗೆ ಹಾಗೂ ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸಲು ಜಿಲ್ಲೆಗಳ ಗಡಿದಾಟಲು ಮುಂದಾದರು. ಆದರೆ ಚೆಕ್ಪೋಸ್ಟ್ನಲ್ಲಿ ‘ಪಾಸ್ ಅಗತ್ಯ ಇದೆ’ ಎಂದು ಪೊಲೀಸರು ಅವರನ್ನು ತಡೆದರು. ಕೆಲವರು ‘ಪಾಸ್ ಇಲ್ಲದೆ ಸಂಚರಿಸಲು ಸರ್ಕಾರ ಆದೇಶಿಸಿದೆ’ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.