ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀಗಳು, ‘ಯಾರೋ ಮಾಡಿದ ಆಚಾತುರ್ಯಕ್ಕೆ ರಾಜನನ್ನು ಕಳೆದುಕೊಂಡರೆ ದೇಶದಲ್ಲಿ ಆಗಬಹುದಾದ ದೊಂಬಿ ಹಾಗೂ ಗಲಾಟೆಯನ್ನು ಊಹಿಸಲು ಅಸಾಧ್ಯ. ಹಿಂದೆ ಇಂತಹ ಅಚಾತುರ್ಯಗಳು ನಡೆದಾಗ ದೊಂಬಿ, ಗಲಾಟೆಗಳನ್ನು ನಡೆದಿದ್ದನ್ನು ಕಂಡಿದ್ದೇವೆ. ಇನ್ನೆಂದೂ ಇಂತಹ ಘಟನೆಗಳು ಮರುಕಳಿಸಬಾರದು’ ಎಂದು ಗುರುಗಳಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ಹೇಳಿದರು.