ಬಳಿಕಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜೀವನದಿ ಸ್ವರ್ಣ ಬತ್ತಿದ್ದು, ಶೀಘ್ರದಲ್ಲಿ ಮಳೆ ಬರುವಂತಾಗಲಿ ಎಂದು ಪಲಿಮಾರು ಶ್ರೀ, ಅದಮಾರು ಕಿರಿಯ ಶ್ರೀ ಹಾಗೂ ಶಿವಳ್ಳಿ ಪುರೋಹಿತರ ಸಂಘದಿಂದ ದೇವರಲ್ಲಿ ಪ್ರಾರ್ಥಿಸಲಾಯಿತು. ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂಬುದು ನಂಬಿಕೆ. ಅವಧಿಗೂ ಮುನ್ನವೇ ಮಳೆ ಬರುವ ವಿಶ್ವಾಸ ಇದೆ ಎಂದರು.