ಸುದ್ದಿ ತಿಳಿಯುತ್ತಿದ್ದಂತೆ ರಸ್ತೆ ವಿಸ್ತರಣೆ ಸ್ಥಳಕ್ಕೆ ಭೇಟಿನೀಡಿದ ಶಾಸಕ ರಘುಪತಿ ಭಟ್ ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಿದರು. ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ತ್ರೀ ಜಿ ಪೂರ್ಣಗೊಂಡು ಪರಿಹಾರ ಮಂಜೂರಾದ ಬಳಿಕವೇ ಕಾಮಗಾರಿ ಆರಂಭವಾಗಿದೆ. ಜಾಗ ಕಳೆದುಕೊಂಡ ಎಲ್ಲರಿಗೂ ನಿಶ್ಚಿತವಾಗಿ ಪರಿಹಾರ ಸಿಗಲಿದೆ. ರಸ್ತೆ ವಿಸ್ತರಣೆ ಹಾಗೂ ಹೆದ್ದಾರಿ ಕಾಮಗಾರಿಗೆ ಅಡ್ಡಿಮಾಡದಂತೆ ಮನವಿ ಮಾಡಿದರು.