ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುರತ್ಕಲ್ ಟೋಲ್ಗೂ, ಹೆಜಮಾಡಿ ಟೋಲ್ಗೂ ಸಂಬಂಧವಿಲ್ಲ. ಸುರತ್ಕಲ್ ಟೋಲ್ ರದ್ದು ಮಾಡಿದ್ದು ಸರಿಯಾಗಿದೆ. ಆದರೆ ಹೆಜಮಾಡಿ ಟೋಲ್ನಲ್ಲಿ ಹೆಚ್ಚುವರಿಯಾಗಿ ಟೋಲ್ ಸಂಗ್ರಹ ಮಾಡಲು ನಿರ್ಧರಿಸಿರುವುದು ಖಂಡನೀಯ. ಇದರಿಂದ ಉಡುಪಿ ಜಿಲ್ಲೆಯ ಜನತೆಗೆ ಹೊರೆಯಾಗಲಿದೆ. ಮುಲ್ಕಿಗೆ ಹೋಗುವ ಜಿಲ್ಲೆಯ ಸಾರ್ವಜನಿಕರು ದುಪ್ಪಟ್ಟು ಟೋಲ್ ಕಟ್ಟಬೇಕಾಗುತ್ತದೆ ಎಂದರು.