ಉಡುಪಿ: ಚಂಡಮಾರುತದ ಪ್ರಭಾವದಿಂದ ಬುಧವಾರ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಸುರಿಯಿತು. ಗಾಳಿ ಮಳೆಗೆ ಕುಂದಾಪುರ ತಾಲ್ಲೂಕಿನ ಬಸ್ರೂರು, ವಡೇರಹೋಬಳಿ, ಹೆಸ್ಕತ್ತೂರು, ಮೊಳಹಳ್ಳಿ, ಶಂಕರನಾರಾಯಣ, ದೇವಲ್ಕುಂದ, ಹೊಸೂರು, ನೂಜಾಡಿ, ಕಂದಾವರ, ಬ್ರಹ್ಮಾವರ ತಾಲ್ಲೂನ ಉಪ್ಪೂರು, 38 ಕಳ್ತೂರು ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿದೆ.