<p><strong>ಉಡುಪಿ: </strong>ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಸಂಘ ಪರಿವಾರ ನಡೆಸಿರುವ ಷಡ್ಯಂತ್ರದ ಭಾಗವೇ ಹಿಜಾಬ್ ವಿವಾದ ಎಂದು ಎಸ್ಡಿಪಿಐ ಮುಖಂಡ ಅತಾವುಲ್ಲ ಜೋಕಟ್ಟೆ ಆರೋಪಿಸಿದರು.</p>.<p>ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಪು ಪುರಸಭೆಯಲ್ಲಿ ಮೂವರು ಎಸ್ಡಿಪಿಐ ಸದಸ್ಯರು ಗೆದ್ದಿದ್ದಕ್ಕೆ ಹತಾಶೆ ಹಾಗೂ ಭಯಗೊಂಡಿರುವ ಶಾಸಕ ರಘುಪತಿ ಭಟ್ ಹಿಜಾಬ್ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಹೇಳಿಕೆಗಳು ನಿರಾಧಾರ’ ಎಂದರು.</p>.<p>ಎಸ್ಡಿಪಿಐ ಪಕ್ಷಕ್ಕೆ ಕೇವಲ ಮುಸ್ಲಿಂ ಮತಗಳು ಮಾತ್ರವಲ್ಲ; ಎಲ್ಲ ವರ್ಗದವರು ಮತ ಹಾಕುತ್ತಿದ್ದಾರೆ. ಕಾಪು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 9 ಅಭ್ಯರ್ಥಿಗಳಲ್ಲಿ ಮೂವರು ಗೆದ್ದಿದ್ದು, ಅವರಲ್ಲಿ ಮುಸ್ಲಿಮೇತರರು ಇದ್ದಾರೆ ಎಂದರು.</p>.<p><a href="https://www.prajavani.net/karnataka-news/karnataka-high-court-interim-order-hijab-row-case-saffron-shawl-hijab-not-allowed-in-college-schools-909962.html" itemprop="url">ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧಾರಣೆಗೆ ನಿಷೇಧ: ಹೈಕೋರ್ಟ್ ಮಧ್ಯಂತರ ಆದೇಶ </a></p>.<p>ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಪು ಪುರಸಭೆಯಲ್ಲಿ ಎಸ್ಡಿಪಿಐಗೆ ಮೂರು ಸೀಟು ಬಂದಿರುವುದರಿಂದ ರಘುಪತಿ ಭಟ್ ಆತಂಕಗೊಂಡದ್ದಾರೆ ಎಂದು ವ್ಯಂಗ್ಯವಾಡಿದರು.</p>.<p>ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊಡಲಾಗಿದ್ದು, ಎಲ್ಲರಿಗೂ ಅವರವರ ಧರ್ಮಗಳನ್ನು ಅನುಸರಿಸುವ ಪಾಲಿಸುವ ಹಕ್ಕುಗಳನ್ನು ಕೊಡಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಹೋಗುವುದು ಅವರ ವೈಯಕ್ತಿಕ ವಿಚಾರ ಹಾಗೂ ಧಾರ್ಮಿಕ ವಿಚಾರ ಎಂದರು.</p>.<p>ಉಡುಪಿ ಹಾಗೂ ಕುಂದಾಪರ ಕಾಲೇಜುಗಳಲ್ಲಿ ಹಿಂದಿನಿಂದಲೂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದರು. ಆಗ ಸುಮ್ಮನಿದ್ದು ಈಗ ಹಿಜಾಬ್ಗೆ ಅಡ್ಡಿಪಡಿಸಲಾಗುತ್ತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಸಂಘ ಪರಿವಾರ ನಡೆಸಿರುವ ಷಡ್ಯಂತ್ರದ ಭಾಗವೇ ಹಿಜಾಬ್ ವಿವಾದ ಎಂದು ಎಸ್ಡಿಪಿಐ ಮುಖಂಡ ಅತಾವುಲ್ಲ ಜೋಕಟ್ಟೆ ಆರೋಪಿಸಿದರು.</p>.<p>ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಪು ಪುರಸಭೆಯಲ್ಲಿ ಮೂವರು ಎಸ್ಡಿಪಿಐ ಸದಸ್ಯರು ಗೆದ್ದಿದ್ದಕ್ಕೆ ಹತಾಶೆ ಹಾಗೂ ಭಯಗೊಂಡಿರುವ ಶಾಸಕ ರಘುಪತಿ ಭಟ್ ಹಿಜಾಬ್ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಹೇಳಿಕೆಗಳು ನಿರಾಧಾರ’ ಎಂದರು.</p>.<p>ಎಸ್ಡಿಪಿಐ ಪಕ್ಷಕ್ಕೆ ಕೇವಲ ಮುಸ್ಲಿಂ ಮತಗಳು ಮಾತ್ರವಲ್ಲ; ಎಲ್ಲ ವರ್ಗದವರು ಮತ ಹಾಕುತ್ತಿದ್ದಾರೆ. ಕಾಪು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 9 ಅಭ್ಯರ್ಥಿಗಳಲ್ಲಿ ಮೂವರು ಗೆದ್ದಿದ್ದು, ಅವರಲ್ಲಿ ಮುಸ್ಲಿಮೇತರರು ಇದ್ದಾರೆ ಎಂದರು.</p>.<p><a href="https://www.prajavani.net/karnataka-news/karnataka-high-court-interim-order-hijab-row-case-saffron-shawl-hijab-not-allowed-in-college-schools-909962.html" itemprop="url">ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧಾರಣೆಗೆ ನಿಷೇಧ: ಹೈಕೋರ್ಟ್ ಮಧ್ಯಂತರ ಆದೇಶ </a></p>.<p>ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಪು ಪುರಸಭೆಯಲ್ಲಿ ಎಸ್ಡಿಪಿಐಗೆ ಮೂರು ಸೀಟು ಬಂದಿರುವುದರಿಂದ ರಘುಪತಿ ಭಟ್ ಆತಂಕಗೊಂಡದ್ದಾರೆ ಎಂದು ವ್ಯಂಗ್ಯವಾಡಿದರು.</p>.<p>ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊಡಲಾಗಿದ್ದು, ಎಲ್ಲರಿಗೂ ಅವರವರ ಧರ್ಮಗಳನ್ನು ಅನುಸರಿಸುವ ಪಾಲಿಸುವ ಹಕ್ಕುಗಳನ್ನು ಕೊಡಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಹೋಗುವುದು ಅವರ ವೈಯಕ್ತಿಕ ವಿಚಾರ ಹಾಗೂ ಧಾರ್ಮಿಕ ವಿಚಾರ ಎಂದರು.</p>.<p>ಉಡುಪಿ ಹಾಗೂ ಕುಂದಾಪರ ಕಾಲೇಜುಗಳಲ್ಲಿ ಹಿಂದಿನಿಂದಲೂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದರು. ಆಗ ಸುಮ್ಮನಿದ್ದು ಈಗ ಹಿಜಾಬ್ಗೆ ಅಡ್ಡಿಪಡಿಸಲಾಗುತ್ತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>