ಕುಂದಾಪುರ: ‘ಸೂರ್ಯಗ್ರಹಣ ಇದ್ದರೂ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಕ್ಕೆ ಭಾನುವಾರ ಯಾವುದೇ ತಡೆ ಇಲ್ಲ’ ಎಂದು ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ ತಿಳಿಸಿದ್ದಾರೆ.
ಪ್ರತಿ ದಿನದಂತೆ ಸರ್ಕಾರದ ನಿರ್ದೇಶನದಂತೆ ಭಕ್ತರಿಗೆ ಅವಕಾಶ ನೀಡಲಾಗುವುದು. ಗ್ರಹಣಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮ ಹಾಗೂ ರುದ್ರಾಭಿಷೇಕವನ್ನು ಕ್ಷೇತ್ರದ ಅರ್ಚಕರು ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.