<p><strong>ಉಡುಪಿ: </strong>ಶಾರುಖ್ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಿರುವ ಬಾಲಿವುಡ್ ಸಿನಿಮಾ ಪಠಾಣ್ನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದ್ದು ‘ಬೈಕಾಟ್ ಪಠಾಣ್’ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.</p>.<p>ಶನಿವಾರ ಮಥುರಾ ಹೋಟೆಲ್ ಸಭಾಂಗಣದಲ್ಲಿ ಮಾತನಾಡಿ, ಪಠಾಣ್ ಚಿತ್ರದಲ್ಲಿ ಕೇಸರಿಯನ್ನು ನಾಚಿಕೆಗೇಡಿನ ಬಣ್ಣವಾಗಿ ತೋರಿಸಲಾಗಿದ್ದು ಅಶ್ಲೀಲ, ಅಸಭ್ಯವಾದ ದೃಶ್ಯಗಳು ಹೆಚ್ಚಾಗಿವೆ. ಬಾಲಿವುಡ್ ಸಿನಿಮಾಗಳಲ್ಲಿ ನಿರಂತರವಾಗಿ ಇಸ್ಲಾಮೀಕರಣ, ನಾಸ್ತಿಕವಾದ, ಕಮ್ಯುನಿಸಂ ವೈಭವೀಕರಿಸಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು.</p>.<p>ಬಾಲಿವುಡ್ನ ಮೂವರೂ ಖಾನ್ಗಳು (ಸಲ್ಮಾನ್, ಶಾರುಖ್, ಅಮೀರ್) ದೇಶದ್ರೋಹಿ, ಧರ್ಮದ್ರೋಹಿ ಹಾಗೂ ಹಿಂದೂ ದ್ರೋಹಿಗಳು. ಖಾನ್ಗಳ ಸಿನಿಮಾನದಲ್ಲಿ ಹಿಂದೂ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ನಾಶಮಾಡುವ ಯತ್ನ ನಡೆಯತ್ತಿದೆ ಎಂದು ದೂರಿದರು.</p>.<p><strong>ಕಾರ್ಕಳದಿಂದ ಸ್ಪರ್ಧೆ:</strong></p>.<p>ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಬಿಜೆಪಿ ವಿರುದ್ಧದ ಹೋರಾಟ ಮಾಡುತ್ತಿಲ್ಲ; ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮುತಾಲಿಕ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಶಾರುಖ್ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಿರುವ ಬಾಲಿವುಡ್ ಸಿನಿಮಾ ಪಠಾಣ್ನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದ್ದು ‘ಬೈಕಾಟ್ ಪಠಾಣ್’ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.</p>.<p>ಶನಿವಾರ ಮಥುರಾ ಹೋಟೆಲ್ ಸಭಾಂಗಣದಲ್ಲಿ ಮಾತನಾಡಿ, ಪಠಾಣ್ ಚಿತ್ರದಲ್ಲಿ ಕೇಸರಿಯನ್ನು ನಾಚಿಕೆಗೇಡಿನ ಬಣ್ಣವಾಗಿ ತೋರಿಸಲಾಗಿದ್ದು ಅಶ್ಲೀಲ, ಅಸಭ್ಯವಾದ ದೃಶ್ಯಗಳು ಹೆಚ್ಚಾಗಿವೆ. ಬಾಲಿವುಡ್ ಸಿನಿಮಾಗಳಲ್ಲಿ ನಿರಂತರವಾಗಿ ಇಸ್ಲಾಮೀಕರಣ, ನಾಸ್ತಿಕವಾದ, ಕಮ್ಯುನಿಸಂ ವೈಭವೀಕರಿಸಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು.</p>.<p>ಬಾಲಿವುಡ್ನ ಮೂವರೂ ಖಾನ್ಗಳು (ಸಲ್ಮಾನ್, ಶಾರುಖ್, ಅಮೀರ್) ದೇಶದ್ರೋಹಿ, ಧರ್ಮದ್ರೋಹಿ ಹಾಗೂ ಹಿಂದೂ ದ್ರೋಹಿಗಳು. ಖಾನ್ಗಳ ಸಿನಿಮಾನದಲ್ಲಿ ಹಿಂದೂ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ನಾಶಮಾಡುವ ಯತ್ನ ನಡೆಯತ್ತಿದೆ ಎಂದು ದೂರಿದರು.</p>.<p><strong>ಕಾರ್ಕಳದಿಂದ ಸ್ಪರ್ಧೆ:</strong></p>.<p>ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಬಿಜೆಪಿ ವಿರುದ್ಧದ ಹೋರಾಟ ಮಾಡುತ್ತಿಲ್ಲ; ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮುತಾಲಿಕ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>