ಅದರಂತೆ, ಉಡುಪಿಯಲ್ಲಿ ಆಶ್ರಯ ಸಮುದಾಯದ ಮುಖ್ಯಸ್ಥರ ಒಪ್ಪಿಗೆ ಪಡೆದು ಹಣ ಸಂಗ್ರಹಿಸಲು ಎರಡು ತಂಡಗಳನ್ನು ರಚಿಸಲಾಯಿತು. ಒಂದು ತಂಡ ಉಡುಪಿ, ಮತ್ತೊಂದು ತಂಡ ಮಣಿಪಾಲ ಹಾಗೂ ಕಾರ್ಕಳದಲ್ಲಿ ಭಿಕ್ಷಾಟನೆ ಮಾಡಲು ನಿರ್ಧರಿಸಿದೆವು. ತಂಡದಲ್ಲಿ ಸಾನ್ವಿ, ಸಂಧ್ಯಾ, ರೇಖಾ, ಲಾವಣ್ಯ, ನಿಶಾ, ಸುಹಾನಾ ಇದ್ದರು ಎಂದು ವಿವರಿಸಿದರು ಸಮೀಕ್ಷಾ.