ಮೂರನೇ ಶಾಸನವು ಪಾರ್ಶ್ವನಾಥ ತೀರ್ಥಕರರ ಪಾದಪೀಠದ ಮೇಲಿದೆ. ಇದು 14ನೇ ಶತಮಾನದ ರಚನೆ ಎಂದು ಹೇಳಬಹುದು. ನಾಲ್ಕನೇ ಶಾಸನವನ್ನು ಹಿತ್ತಾಳೆಯದ್ದಾಗಿದ್ದು, ಪ್ರಭಾವಳಿ, ಕೀರ್ತಿಮುಖ, ಏಕಛಾತ್ರ ಮತ್ತು ಯಕ್ಷಯಕ್ಷಿಯರನ್ನು ಹೊಂದಿದೆ. ಕ್ಷೇತ್ರ ಕಾರ್ಯದಲ್ಲಿ ಸಂದೇಶ್ ಜೈನ್, ಭರತ್ ರಾಜ್ ಮೂಡಾರು, ವಿಜಯಕುಮಾರ್ ಹೊಸ್ಮಾರು, ಶಮಿತ್ಚಂದ್ರ ಸಹಕರ ನೀಡಿದ್ದಾರೆ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.