ಶಿರ್ವ: ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ಮಧ್ವನವಮಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಶ್ಚರಣೆ, ಋಕ್ ಸಂಹಿತಾ ಯಾಗದ ಪೂರ್ಣಾಹುತಿ, ಪ್ರವಚನ, ಭಜನೆ ಮತ್ತಿತರ ಅಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ಈಚೆಗೆ ನಡೆದವು.
ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಭಗವಂತನಲ್ಲಿ ಭಕ್ತಿಯ ಅರಿವು ಬರಬೇಕಾದರೆ ತತ್ವಜ್ಞಾನದ ಅರಿವು ಇರಬೇಕು ಎಂದು ಅಭಿಪ್ರಾಯಪಟ್ಟರು.
ದೇವರು ಸರ್ವೋತ್ತಮ, ಗುಣಪರಿಪೂರ್ಣ ಎಂಬ ಸ್ವರೂಪ ಜ್ಞಾನ ತಿಳಿಸಿಕೊಟ್ಟು ಗೊಂದಲಗಳನ್ನು ನಿವಾರಿಸಿ ಜಗತ್ತಿಗೆ ತತ್ವಜ್ಞಾನವನ್ನು ನೀಡಿದವರು ಮಧ್ವಾಚಾರ್ಯರು ಎಂದರು.
ವಾದಿರಾಜ ಯತಿಗಳಿಂದ ಪ್ರತಿಷ್ಠಿತ ಮಧ್ವಾಚಾರ್ಯರ ಪ್ರತಿಮೆಗೆ ಮಹಾಪೂಜೆಯನ್ನು ನೆರವೇರಿಸಿದರು.