<p><strong>ಉಡುಪಿ</strong>: ನವರಾತ್ರಿ, ದೀಪಾವಳಿ ಹಬ್ಬಗಳು ಮುಗಿದ ಬಳಿಕ ಇದೀಗ ತರಕಾರಿ ಬೆಲೆ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.</p>.<p>ಕೆ.ಜಿ.ಗೆ ₹80ರ ಆಸುಪಾಸಿನಲ್ಲಿದ್ದ ತೊಂಡೆಕಾಯಿ ದರ ಈಗ ಕೆ.ಜಿಗೆ ₹120ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೆ.ಜಿ ₹60 ಇದ್ದ ಅಲಸಂಡೆ ದರ ₹100ಕ್ಕೆ ಏರಿಕೆಯಾಗಿದೆ.</p>.<p>ಉಡುಪಿಯಲ್ಲಿ ಹೆಚ್ಚು ಬೇಡಿಕೆ ಇರುವ ಮಟ್ಟುಗುಳ್ಳಾದ ದರ ಕೆ.ಜಿಗೆ ₹160ಕ್ಕೆ ಏರಿಕೆಯಾಗಿದೆ. ಬದನೆಕಾಯಿ ದರ ಕೆ.ಜಿಗೆ ₹100 ಇದೆ. ಕಳೆದ ವಾರ ಬದನೆಕಾಯಿ ದರ ಕೆ.ಜಿಗೆ ₹80ರ ಆಸುಪಾಸಿನಲ್ಲಿತ್ತು.</p>.<p>ಸಾಮಾನ್ಯವಾಗಿ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಮಂಗಳೂರು ಸೌತೆಯ ದರ ₹50ಕ್ಕೆ ಏರಿಕೆಯಾಗಿದೆ. ಬೀನ್ಸ್ ₹80ಕ್ಕೆ ಏರಿಕೆಯಾಗಿದೆ.</p>.<p>ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗುವ ತರಕಾರಿ ದರ ಹಬ್ಬ ಮುಗಿದ ಬಳಿಕ ತುಸು ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಹಬ್ಬಗಳು ಮುಗಿದ ಬಳಿಕ ತರಕಾರಿ ದರ ಒಮ್ಮೆಲೆ ಜಿಗಿದಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.</p>.<p>ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಇತರ ಬೆಳೆಗಳಂತೆ ತರಕಾರಿ ಬೆಳೆಗೂ ಸಾಕಷ್ಟು ಹಾನಿಯಾಗಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಬಾರಿ ಮಳೆ ಸುರಿದ ಪರಿಣಾಮವಾಗಿ ತರಕಾರಿಗಳು ಹೊಲದಲ್ಲೇ ಕೊಳೆತು ಹೋಗಿದ್ದು, ಈ ಕಾರಣಕ್ಕೆ ದರ ಏರಿಕೆಯಾಗಿದೆ ಎನ್ನುತ್ತಾರೆ ಬಹುತೇಕ ಮಾರಾಟಗಾರರು.</p>.<p>ದೀಪಾವಳಿ ಕಳೆದ ನಂತರವೂ ಕೆಲ ದಿನ ಬಾರಿ ಮಳೆ ಬಂದ ಕಾರಣ ತರಕಾರಿ ಬೆಳೆಗಾರರಿಗೆ ಏಟು ಬಿದ್ದಿದೆ ಎಂದು ತಿಳಿಸಿದ್ದಾರೆ.</p>.<p>‘ಜಿಲ್ಲೆಯಲ್ಲೂ ಮಳೆಯಿಂದಾಗಿ ಕೆಲವೆಡೆ ತರಕಾರಿ ಬೆಳೆ ಹಾನಿಗೀಡಾಗಿದೆ. ಈ ಕಾರಣಕ್ಕೆ ಸ್ಥಳೀಯವಾಗಿ ಸಿಗುವ ಅರಿವೆ, ಬದನೆ, ಬಿಳಿ ಬೆಂಡೆಕಾಯಿ ಮೊದಲಾದವುಗಳ ದರ ಕೂಡ ಏರಿಕೆಯಾಗಿದೆ’ ಎನ್ನುತ್ತಾರೆ ಉಡುಪಿಯ ತರಕಾರಿ ಮಾರಾಟಗಾರ ಜಯಾನಂದ.</p>.<p>‘ಸ್ಥಳೀಯವಾಗಿ ಬೆಳೆಯುವ ದೊಡ್ಡ ಅರಿವೆಯ ಒಂದು ದಂಟಿಗೆ ₹40 ಇದೆ. ಬಿಳಿ ಬೆಂಡೆಕಾಯಿ ದರ ಕೆ.ಜಿಗೆ ₹130ಕ್ಕೆ ಏರಿಕೆಯಾಗಿದೆ. ಈ ಬಾರಿ ಸ್ಥಳೀಯವಾಗಿ ಬೆಳೆಯುವ ಬಿಳಿ ಬೆಂಡೆಕಾಯಿ ಮಾರಾಟಕ್ಕೆ ಬರುವುದೇ ಅಪರೂಪವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳ ಆವಕ ಕಡಿಮೆಯಾಗಿದೆ ಇದು ಕೂಡ ಕೆಲವು ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಲು ಕಾರಣವಾಗಿದೆ’ ಎಂದು ಅವರು ವಿವರಿಸಿದರು.</p>.<div><blockquote>ದೀಪಾವಳಿ ಹಬ್ಬದ ಸಂದರ್ಭಕ್ಕಿಂತಲೂ ಈಗ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದೆ ಹಾಗಿದ್ದರೂ ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.</blockquote><span class="attribution">– ಶ್ರೀನಿವಾಸ್, ಗ್ರಾಹಕ</span></div>.<div><blockquote>ಕೆಲವು ತರಕಾರಿಗಳ ಬೆಲೆ ವಿಪರೀತ ಏರಿಕೆ ಆಗಿರುವುದರಿಂದ ಅವುಗಳನ್ನು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.</blockquote><span class="attribution">– ಜಯಾನಂದ,, ತರಕಾರಿ ವ್ಯಾಪಾರಿ ಉಡುಪಿ</span></div>.<p><strong>ಬಾಳೆಹಣ್ಣು ದರ ಅಲ್ಪ ಇಳಿಕೆ</strong></p><p>ಹಬ್ಬದ ಸಂದರ್ಭಗಳಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಪೂಜೆಯ ವೇಳೆ ಈ ಬಾಳೆಹಣ್ಣನ್ನು ಬಳಸುವ ಕಾರಣ ಇದರ ದರವೂ ಏರಿಕೆಯಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆ.ಜಿಗೆ ₹120ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆಹಣ್ಣಿನ ದರ ಈಗ ಕೆ.ಜಿಗೆ ₹80ಕ್ಕೆ ಇಳಿಕೆಯಾಗಿದೆ. ನೇಂದ್ರ ಬಾಳೆ ಹಣ್ಣಿನ ದರ ಕೆ.ಜಿಗೆ ₹80 ಇದ್ದಿದ್ದು ₹60ಕ್ಕೆ ಇಳಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ನವರಾತ್ರಿ, ದೀಪಾವಳಿ ಹಬ್ಬಗಳು ಮುಗಿದ ಬಳಿಕ ಇದೀಗ ತರಕಾರಿ ಬೆಲೆ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.</p>.<p>ಕೆ.ಜಿ.ಗೆ ₹80ರ ಆಸುಪಾಸಿನಲ್ಲಿದ್ದ ತೊಂಡೆಕಾಯಿ ದರ ಈಗ ಕೆ.ಜಿಗೆ ₹120ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೆ.ಜಿ ₹60 ಇದ್ದ ಅಲಸಂಡೆ ದರ ₹100ಕ್ಕೆ ಏರಿಕೆಯಾಗಿದೆ.</p>.<p>ಉಡುಪಿಯಲ್ಲಿ ಹೆಚ್ಚು ಬೇಡಿಕೆ ಇರುವ ಮಟ್ಟುಗುಳ್ಳಾದ ದರ ಕೆ.ಜಿಗೆ ₹160ಕ್ಕೆ ಏರಿಕೆಯಾಗಿದೆ. ಬದನೆಕಾಯಿ ದರ ಕೆ.ಜಿಗೆ ₹100 ಇದೆ. ಕಳೆದ ವಾರ ಬದನೆಕಾಯಿ ದರ ಕೆ.ಜಿಗೆ ₹80ರ ಆಸುಪಾಸಿನಲ್ಲಿತ್ತು.</p>.<p>ಸಾಮಾನ್ಯವಾಗಿ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಮಂಗಳೂರು ಸೌತೆಯ ದರ ₹50ಕ್ಕೆ ಏರಿಕೆಯಾಗಿದೆ. ಬೀನ್ಸ್ ₹80ಕ್ಕೆ ಏರಿಕೆಯಾಗಿದೆ.</p>.<p>ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗುವ ತರಕಾರಿ ದರ ಹಬ್ಬ ಮುಗಿದ ಬಳಿಕ ತುಸು ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಹಬ್ಬಗಳು ಮುಗಿದ ಬಳಿಕ ತರಕಾರಿ ದರ ಒಮ್ಮೆಲೆ ಜಿಗಿದಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.</p>.<p>ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಇತರ ಬೆಳೆಗಳಂತೆ ತರಕಾರಿ ಬೆಳೆಗೂ ಸಾಕಷ್ಟು ಹಾನಿಯಾಗಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಬಾರಿ ಮಳೆ ಸುರಿದ ಪರಿಣಾಮವಾಗಿ ತರಕಾರಿಗಳು ಹೊಲದಲ್ಲೇ ಕೊಳೆತು ಹೋಗಿದ್ದು, ಈ ಕಾರಣಕ್ಕೆ ದರ ಏರಿಕೆಯಾಗಿದೆ ಎನ್ನುತ್ತಾರೆ ಬಹುತೇಕ ಮಾರಾಟಗಾರರು.</p>.<p>ದೀಪಾವಳಿ ಕಳೆದ ನಂತರವೂ ಕೆಲ ದಿನ ಬಾರಿ ಮಳೆ ಬಂದ ಕಾರಣ ತರಕಾರಿ ಬೆಳೆಗಾರರಿಗೆ ಏಟು ಬಿದ್ದಿದೆ ಎಂದು ತಿಳಿಸಿದ್ದಾರೆ.</p>.<p>‘ಜಿಲ್ಲೆಯಲ್ಲೂ ಮಳೆಯಿಂದಾಗಿ ಕೆಲವೆಡೆ ತರಕಾರಿ ಬೆಳೆ ಹಾನಿಗೀಡಾಗಿದೆ. ಈ ಕಾರಣಕ್ಕೆ ಸ್ಥಳೀಯವಾಗಿ ಸಿಗುವ ಅರಿವೆ, ಬದನೆ, ಬಿಳಿ ಬೆಂಡೆಕಾಯಿ ಮೊದಲಾದವುಗಳ ದರ ಕೂಡ ಏರಿಕೆಯಾಗಿದೆ’ ಎನ್ನುತ್ತಾರೆ ಉಡುಪಿಯ ತರಕಾರಿ ಮಾರಾಟಗಾರ ಜಯಾನಂದ.</p>.<p>‘ಸ್ಥಳೀಯವಾಗಿ ಬೆಳೆಯುವ ದೊಡ್ಡ ಅರಿವೆಯ ಒಂದು ದಂಟಿಗೆ ₹40 ಇದೆ. ಬಿಳಿ ಬೆಂಡೆಕಾಯಿ ದರ ಕೆ.ಜಿಗೆ ₹130ಕ್ಕೆ ಏರಿಕೆಯಾಗಿದೆ. ಈ ಬಾರಿ ಸ್ಥಳೀಯವಾಗಿ ಬೆಳೆಯುವ ಬಿಳಿ ಬೆಂಡೆಕಾಯಿ ಮಾರಾಟಕ್ಕೆ ಬರುವುದೇ ಅಪರೂಪವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳ ಆವಕ ಕಡಿಮೆಯಾಗಿದೆ ಇದು ಕೂಡ ಕೆಲವು ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಲು ಕಾರಣವಾಗಿದೆ’ ಎಂದು ಅವರು ವಿವರಿಸಿದರು.</p>.<div><blockquote>ದೀಪಾವಳಿ ಹಬ್ಬದ ಸಂದರ್ಭಕ್ಕಿಂತಲೂ ಈಗ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದೆ ಹಾಗಿದ್ದರೂ ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.</blockquote><span class="attribution">– ಶ್ರೀನಿವಾಸ್, ಗ್ರಾಹಕ</span></div>.<div><blockquote>ಕೆಲವು ತರಕಾರಿಗಳ ಬೆಲೆ ವಿಪರೀತ ಏರಿಕೆ ಆಗಿರುವುದರಿಂದ ಅವುಗಳನ್ನು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.</blockquote><span class="attribution">– ಜಯಾನಂದ,, ತರಕಾರಿ ವ್ಯಾಪಾರಿ ಉಡುಪಿ</span></div>.<p><strong>ಬಾಳೆಹಣ್ಣು ದರ ಅಲ್ಪ ಇಳಿಕೆ</strong></p><p>ಹಬ್ಬದ ಸಂದರ್ಭಗಳಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಪೂಜೆಯ ವೇಳೆ ಈ ಬಾಳೆಹಣ್ಣನ್ನು ಬಳಸುವ ಕಾರಣ ಇದರ ದರವೂ ಏರಿಕೆಯಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆ.ಜಿಗೆ ₹120ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆಹಣ್ಣಿನ ದರ ಈಗ ಕೆ.ಜಿಗೆ ₹80ಕ್ಕೆ ಇಳಿಕೆಯಾಗಿದೆ. ನೇಂದ್ರ ಬಾಳೆ ಹಣ್ಣಿನ ದರ ಕೆ.ಜಿಗೆ ₹80 ಇದ್ದಿದ್ದು ₹60ಕ್ಕೆ ಇಳಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>