‘ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಅಯೋಧ್ಯೆ ಪ್ರತಿಭಟನೆತೀವ್ರ ಸ್ವರೂಪ ಪಡೆದು 10 ಮಂದಿಯ ಹತ್ಯೆಯಾಯಿತು. ಆ ಪ್ರತಿಭಟನೆಯಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ವಿದ್ಯಾಮಾನ್ಯ ತೀರ್ಥರು, ವಿಭುದೇಶ ತೀರ್ಥರು, ಸುಬ್ರಹ್ಮಣ್ಯ ಶ್ರೀಗಳು ಸೇರಿದಂತೆ ಏಳೆಂಟು ಸ್ವಾಮೀಜಿಗಳನ್ನು ಬಂಧಿಸಲಾಯಿತು’ ಎಂದು ಪೇಜಾವರ ಶ್ರೀಗಳು ಅಂದಿನ ಘಟನೆಯನ್ನು ಮೆಲುಕು ಹಾಕಿದರು.