ಮೇ 1ರಂದು ತಲ್ಲೂರು ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆನ್ಷನ್ ಸಭಾಭವನದಲ್ಲಿ ಗೌರಿ, ಶ್ರೀನಿವಾಸ್ ದಂಪತಿ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಹಾಗೂ ಲೀಲಾವತಿ, ನಾರಾಯಣ ದಂಪತಿ ಪುತ್ರಿ ಪೂರ್ಣಿಮಾ ಅವರ ವಿವಾಹ ಮಹೋತ್ಸವ ನಡೆಯಲಿದೆ. ಇವರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ಜಾಗೃತಿ ಸಂದೇಶ ಮುದ್ರಿಸಲಾಗಿದ್ದು, ಮತದಾನದ ಮಹತ್ವವನ್ನು ಸಾರಲಾಗಿದೆ.