ಜಮಾತ್ ಅಧ್ಯಕ್ಷ ಜನಾಬ್ ಅಶ್ಫಾಕ್ ಅಹ್ಮದ್ ಮಾತನಾಡಿ, ‘ದೇಶದಲ್ಲಿ ಜನರು ಶಾಂತಿ ಹಾಗೂ ನೆಮ್ಮದಿಯಿಂದ ಬಾಳಬೇಕು. ದೇಶದ ಭದ್ರತೆಗೆ, ಅಖಂಡತೆಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುವುದೇ ಹಬ್ಬದ ಸಂದೇಶ’ ಎಂದರು.
ನಮಾಜ್ ನೆರವೇರಿಸಲು ದೂರ ದೂರದಿಂದ ಆಗಮಿಸಿದ ಸಹಸ್ರಾರು ಮಂದಿ ಭಕ್ತಾದಿಗಳು ಈದ್ಗಾದಲ್ಲಿ ಜಮಾಯಿಸಿದ್ದರು.