<p><strong>ಕಾಪು (ಕಟಪಾಡಿ):</strong> `ಮಕ್ಕಳು ಸಿನಿಮಾ ಅಥವಾ ಕ್ರೀಡಾ ತಾರೆಯರ ಬದಲು ಪೋಷಕರನ್ನು ಅನುಕರಿಸಬೇಕು. ಮಕ್ಕಳನ್ನು ರೂಪಿಸಲು ಪೋಷಕರು ಮಾದರಿ ಜೀವನ ನಡೆಸಬೇಕು~ ಎಂದು ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಹೇಳಿದರು.<br /> <br /> ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಇಲ್ಲಿ ಆರಂಭಗೊಂಡ `ಜೀವನ ಕೌಶಲ ಮತ್ತು ಸಮುದಾಯ ದೇಶ~ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> `ಹದಿಹರೆಯದವರು ಗೊಂದಲದ ಸ್ಥಿತಿಯಲ್ಲಿರುತ್ತಾರೆ. ಅವರು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವುದು ಸಾಮಾನ್ಯ. ಮಕ್ಕಳಿಗೆ ಸ್ನೇಹಿತರ ಮಾತುಗಳೇ ಈ ಅವಧಿಯಲ್ಲಿ ವೇದವಾಕ್ಯ. ಈ ಸಮಯದಲ್ಲಿ ಉತ್ತಮ ಗುಣನಡತೆಯ ಸ್ನೇಹಿತರು ದೊರೆತೆರೆ ಭವಿಷ್ಯ ಉತ್ತಮವಾಗುತ್ತದೆ~ ಎಂದು ಹೇಳಿದರು. <br /> <br /> ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಪಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ವಿ.ಕೆ.ಉದ್ಯಾವರ, ಪ್ರಾಂಶುಪಾಲ ವಿದ್ಯಾಧರ್ಪುರಾಣಿಕ್, ಮುಖ್ಯಶಿಕ್ಷಕಿ ಜಯಭಾರತಿ, , ಅಗಸ್ಟಿನಾ ಬರ್ಲಾ, ಚೇತನ್, ಪ್ರಭಾ, ಗ್ಲಾಸಿಶ್, ಇಶ್ರಾಕ್ ಮತ್ತಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಪು (ಕಟಪಾಡಿ):</strong> `ಮಕ್ಕಳು ಸಿನಿಮಾ ಅಥವಾ ಕ್ರೀಡಾ ತಾರೆಯರ ಬದಲು ಪೋಷಕರನ್ನು ಅನುಕರಿಸಬೇಕು. ಮಕ್ಕಳನ್ನು ರೂಪಿಸಲು ಪೋಷಕರು ಮಾದರಿ ಜೀವನ ನಡೆಸಬೇಕು~ ಎಂದು ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಹೇಳಿದರು.<br /> <br /> ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಇಲ್ಲಿ ಆರಂಭಗೊಂಡ `ಜೀವನ ಕೌಶಲ ಮತ್ತು ಸಮುದಾಯ ದೇಶ~ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> `ಹದಿಹರೆಯದವರು ಗೊಂದಲದ ಸ್ಥಿತಿಯಲ್ಲಿರುತ್ತಾರೆ. ಅವರು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವುದು ಸಾಮಾನ್ಯ. ಮಕ್ಕಳಿಗೆ ಸ್ನೇಹಿತರ ಮಾತುಗಳೇ ಈ ಅವಧಿಯಲ್ಲಿ ವೇದವಾಕ್ಯ. ಈ ಸಮಯದಲ್ಲಿ ಉತ್ತಮ ಗುಣನಡತೆಯ ಸ್ನೇಹಿತರು ದೊರೆತೆರೆ ಭವಿಷ್ಯ ಉತ್ತಮವಾಗುತ್ತದೆ~ ಎಂದು ಹೇಳಿದರು. <br /> <br /> ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಪಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ವಿ.ಕೆ.ಉದ್ಯಾವರ, ಪ್ರಾಂಶುಪಾಲ ವಿದ್ಯಾಧರ್ಪುರಾಣಿಕ್, ಮುಖ್ಯಶಿಕ್ಷಕಿ ಜಯಭಾರತಿ, , ಅಗಸ್ಟಿನಾ ಬರ್ಲಾ, ಚೇತನ್, ಪ್ರಭಾ, ಗ್ಲಾಸಿಶ್, ಇಶ್ರಾಕ್ ಮತ್ತಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>