<p><strong>ಉಡುಪಿ</strong>: ‘ಯೋಗ ಒಂದು ಕಲೆ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿರುವ ಶುದ್ಧ ವಿಜ್ಞಾನ. ಇದನ್ನು ಭಾರತೀಯರು ವಿಶ್ವ ಮನುಕುಲದ ಕಲ್ಯಾಣಕ್ಕಾಗಿ ನೀಡಿದ್ದಾರೆ’ ಎಂದು ಯೋಗ ಶಿಕ್ಷಕ ಸುರೇಶ್ ಭಕ್ತ ಮಣಿಪಾಲ ಹೇಳಿದರು.<br /> <br /> ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಶತ ಶತಮಾನಗಳಿಂದ ಭಾರತೀಯರಲ್ಲಿ ಪ್ರಚಲಿತದಲ್ಲಿದ್ದು, ಪಾಶ್ಚಾತ್ಯ ದೇಶಗಳಲ್ಲಿಯೂ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ ಎಂದರು.<br /> <br /> ಪ್ರಾಣಯಾಮಗಳಾದ ಕಪಾಲಬಾತಿ ಮತ್ತು ಅನುಲೋಮ ವಿಲೋಮಗಳನ್ನು ಕ್ರಮವಾಗಿ ಇಪ್ಪತ್ತು ನಿಮಿಷಗಳಿಗೆ ಮೀರಿ ಮಾಡುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನಿರಂತರ ಶೀತ, ಕೆಮ್ಮು ಮತ್ತು ಕೊಬ್ಬಿನಾಂಶಗಳನ್ನು ಔಷಧಿಗಳ ಸಹಾ ಯವಿಲ್ಲದೆ ಹತೋಟಿಗೆ ತರಬಹುದು ಎಂದು ಅಭಿಪ್ರಾಯಪಟ್ಟರು.<br /> <br /> ಎಚ್.ಎನ್. ಕಾಮತ್ ಮಣಿಪಾಲ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಯಾಮಗಳನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಸ್ವಾಗತಿಸಿದರು, ವಿದ್ಯಾರ್ಥಿನಿ ಮಿಂಟುಮೋಲ್ ಆಂಟನಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ‘ಯೋಗ ಒಂದು ಕಲೆ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿರುವ ಶುದ್ಧ ವಿಜ್ಞಾನ. ಇದನ್ನು ಭಾರತೀಯರು ವಿಶ್ವ ಮನುಕುಲದ ಕಲ್ಯಾಣಕ್ಕಾಗಿ ನೀಡಿದ್ದಾರೆ’ ಎಂದು ಯೋಗ ಶಿಕ್ಷಕ ಸುರೇಶ್ ಭಕ್ತ ಮಣಿಪಾಲ ಹೇಳಿದರು.<br /> <br /> ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಶತ ಶತಮಾನಗಳಿಂದ ಭಾರತೀಯರಲ್ಲಿ ಪ್ರಚಲಿತದಲ್ಲಿದ್ದು, ಪಾಶ್ಚಾತ್ಯ ದೇಶಗಳಲ್ಲಿಯೂ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ ಎಂದರು.<br /> <br /> ಪ್ರಾಣಯಾಮಗಳಾದ ಕಪಾಲಬಾತಿ ಮತ್ತು ಅನುಲೋಮ ವಿಲೋಮಗಳನ್ನು ಕ್ರಮವಾಗಿ ಇಪ್ಪತ್ತು ನಿಮಿಷಗಳಿಗೆ ಮೀರಿ ಮಾಡುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನಿರಂತರ ಶೀತ, ಕೆಮ್ಮು ಮತ್ತು ಕೊಬ್ಬಿನಾಂಶಗಳನ್ನು ಔಷಧಿಗಳ ಸಹಾ ಯವಿಲ್ಲದೆ ಹತೋಟಿಗೆ ತರಬಹುದು ಎಂದು ಅಭಿಪ್ರಾಯಪಟ್ಟರು.<br /> <br /> ಎಚ್.ಎನ್. ಕಾಮತ್ ಮಣಿಪಾಲ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಯಾಮಗಳನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಸ್ವಾಗತಿಸಿದರು, ವಿದ್ಯಾರ್ಥಿನಿ ಮಿಂಟುಮೋಲ್ ಆಂಟನಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>