ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಬರೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ

ಶಿರವಾಡದಲ್ಲಿ ತರಾತುರಿಯಲ್ಲಿ ಮೀಟರ್ ಬೋರ್ಡ್ ಅಳವಡಿಕೆಯ ಆರೋಪ
Last Updated 19 ಮಾರ್ಚ್ 2019, 11:47 IST
ಅಕ್ಷರ ಗಾತ್ರ

ಕಾರವಾರ:ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ನೀಡುವ ಕೇಂದ್ರ ಸರ್ಕಾರದ ‘ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಯೋಜನೆ’ಯ ಜಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಮೀಟರ್ ಅಳವಡಿಕೆ ಅರೆಬರೆಯಾಗಿ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ವಿದ್ಯುತ್ ತಂತಿ ಎಳೆಯುವಗುತ್ತಿಗೆಯನ್ನುಬಜಾಜ್ ಸಂಸ್ಥೆ ಹಾಗೂ ಡಿಜಿಟಲ್ ಮೀಟರ್ ಬೋರ್ಡ್ ಅಳವಡಿಕೆಯ ಜವಾಬ್ದಾರಿಯನ್ನು ಆರ್‌ಎಂಸಿ ಸಂಸ್ಥೆಪಡೆದುಕೊಂಡಿವೆ. ಇನ್ನೂ ಹಲವು ತಾಲ್ಲೂಕುಗಳಲ್ಲಿ ವಿದ್ಯುತ್ ತಂತಿ ಎಳೆದಾಗಿಲ್ಲ. ಅಲ್ಲದೇ ಹಳೆಯ ಮೀಟರ್ ಬದಲಿಸಿ ಹೊಸದನ್ನು ಅಳವಡಿಸುವ ಕಾರ್ಯವೂ ಅಪೂರ್ಣವಾಗಿದೆ. ಆದರೆ, ಈಗ ಚುನಾವಣೆ ಸಮೀಪಿಸುತ್ತಿರುವ ಕಾರಣ ತರಾತುರಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಳೆಯ ಮೀಟರ್ ಇದ್ದ ಜಾಗದ ಕೆಳಭಾಗದಲ್ಲೇಹೊಸದನ್ನುಅಳವಡಿಸಿದ್ದಾರೆ. ಇದು ಮಕ್ಕಳ ಕೈಗೂ ಸಿಗುವಂತಿದ್ದು, ಅಪಾಯವಾದರೆ ಯಾರು ಹೊಣೆ ಎಂಬುದು ಜನರ ಪ್ರಶ್ನೆಯಾಗಿದೆ. ಕೆಲವು ಮನೆಗಳಲ್ಲಿ ಮೀಟರ್‌ನ ವಿದ್ಯುತ್ ತಂತಿಯನ್ನು ತೆರೆದಿಡಲಾಗಿದೆ.ಸೂಕ್ತ ಸ್ಥಳದಲ್ಲಿಮೀಟರ್ಅಳವಡಿಸಿ ಎಂದು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂಬ ದೂರು ಶಿರವಾಡದ ನಾರಗೇರಿ ಪ್ರದೇಶದ ಜನರದ್ದಾಗಿದೆ.

ಯೋಜನೆಯಡಿ ವಿದ್ಯುದೀಕರಣ ಕೆಲಸವನ್ನು ಮಾರ್ಚ್ ತಿಂಗಳಒಳಗಾಗಿ ಮುಕ್ತಾಯಗೊಳಿಸಬೇಕು ಎಂದುಕೇಂದ್ರ ಸಚಿವ ಅನಂತಕುಮಾರ್ ಹೆಗಡೆಕೆಲವು ತಿಂಗಳ ಹಿಂದೆಹಮ್ಮಿಕೊಂಡಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಇದೀಗ ಮಾರ್ಚ್ ತಿಂಗಳ ಮಧ್ಯಭಾಗ ಕಳೆದಿದ್ದು, ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಲಸ ಮಾಡಲಾಗುತ್ತಿದೆ ಎಂಬ ದೂರು ಗ್ರಾಮಸ್ಥರದ್ದಾಗಿದೆ.

‘ಸೂಚನೇ ನೀಡದೇ ಕಾಮಗಾರಿ’: ‘ಕೆಲವು ಮನೆಗಳಲ್ಲಿ ಯಾವುದೇ ಸೂಚನೆ ನೀಡದೇ ಬಂದ ಗುತ್ತಿಗೆದಾರ ಸಂಸ್ಥೆಯವರು, ಮನೆ ಮಾಲೀಕರಿಲ್ಲದಿದ್ದಾಗ ಬಂದು ಮೀಟರ್ ಅಳವಡಿಸಿದ್ದಾರೆ. ಕೆಲವು ಮನೆಗಳಿಂದಹಣವನ್ನೂ ವಸೂಲಿ ಮಾಡಿದ್ದಾರೆ. ವಿದ್ಯುತ್ ಮೀಟರ್ ಅಳವಡಿಕೆಯ ಸಂದರ್ಭ ಹೆಸ್ಕಾಂನ ಸಿಬ್ಬಂದಿ ಕೂಡ ಜೊತೆಗಿರಲಿಲ್ಲ. ಕೆಲವು ಮನೆಗಳಲ್ಲಿ ಅರೆಬರೆ ಕೆಲಸ ಮಾಡಿದ್ದರೆ, ಮತ್ತೆ ಕೆಲವು ಕಡೆ ಮನೆಯ ಬಾಗಿಲಿನ ಸಮೀಪದಲ್ಲೇ ಮೀಟರ್ ಬೋರ್ಡ್ ಅಳವಡಿಸಿದ್ದಾರೆ’ ಎಂದು ಶಿರವಾಡ ಗ್ರಾಮ ಪಂಚಾಯ್ತಿ ಸದಸ್ಯಗಜಾನನ ಬಾಂದೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT