ತೆಂಗು, ಅಡಿಕೆ ಮರಗಳು, ಸಸಿಗಳು ನೀರಿಲ್ಲದೇ ಒಂದು ತಿಂಗಳವರೆಗೆ ಹೇಗಾದರೂ ಇರುತ್ತವೆ. ಅದಕ್ಕೂ ಮೀರಿ ಬಿಸಿಲಿನ ಝಳ ಹೆಚ್ಚಾದರೆ, ಮರಗಳು ಸುಟ್ಟುಹೋಗುವ ಅಪಾಯವೂ ಇದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ, ಈಗಾಗಲೇ ತೋಟಗಳಲ್ಲಿ ಒಣಗಿ ನಿಂತಿರುವ ತೆಂಗು, ಅಡಿಕೆ ಮರಗಳು ಇದ್ದಲ್ಲೇ ಸಾಯುತ್ತವೆ. ಮುಂದೆ ಈ ಮರಗಳಿಂದ ಬೆಳೆ ನಿರೀಕ್ಷೆ ಮಾಡುವ ಹಾಗಿಲ್ಲ ಎಂದು ಕೃಷಿಕರಾದ ಮಾರುಕೇರಿ ಕೋಟಖಂಡದ ಕೃಷ್ಣಮೂರ್ತಿ ಹೆಗಡೆ ಬೇಸರದಿಂದ ಹೇಳಿದರು.