ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕದಂಬ ಮಾರ್ಕೆಟಿಂಗ್‌ನಲ್ಲಿ ಬಾಳೆಕಾಯಿ ಟೆಂಡರ್

Last Updated 29 ಏಪ್ರಿಲ್ 2020, 14:47 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು ಹಸಿ ಅಡಿಕೆ ಟೆಂಡರ್ ಮಾದರಿಯಲ್ಲಿ, ಬಾಳೆಕಾಯಿ ಟೆಂಡರ್ ನಡೆಸಲು ಮುಂದಾಗಿದೆ. ಮೇ 5ರಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಈ ಮಾದರಿಯ ಹರಾಜು ಪ್ರಕ್ರಿಯೆ ನಡೆಯಲಿದೆ.

ಇದರಿಂದ ರೈತರಿಗೆ ಸ್ಪರ್ಧಾತ್ಮಕ ದರ ದೊರೆಯುತ್ತದೆ. ಬಿಲ್ ಮೂಲಕ ಖರೀದಿ, ಮಾರಾಟ ನಡೆಯುವುದರಿಂದ ಆರ್ಥಿಕ ಶಿಸ್ತು ಪಾಲನೆಯಾಗುತ್ತದೆ.

ರೈತರಿಗೆ ಸ್ಪರ್ಧಾತ್ಮಕ ದರ ದೊರೆಯಲಿದೆ. ಬಿಲ್ ಮೂಲಕ ಖರೀದಿ–ಮಾರಾಟದಿಂದಾಗಿ ಆರ್ಥಿಕ ಶಿಸ್ತು ಪಾಲಿಸಲು ಸಾಧ್ಯವಾಗಲಿದ್ದು, ವ್ಯಾಪಾರಸ್ಥರಿಗೂ ಒಂದೇ ಕಡೆ ಖರೀದಿಯ ಅನುಕೂಲ ಆಗಲಿದೆ. ಆಸಕ್ತವ್ಯಾಪಾರಸ್ಥರುಹೆಚ್ಚಿನ ಮಾಹಿತಿಗಾಗಿವ್ಯವಸ್ಥಾಪಕರ ವಿಶ್ವೇಶ್ವರ ಭಟ್ಟ (9242185319) ಅವರನ್ನು, 8-10 ಕ್ವಿಂಟಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಮಿಟ್ಲಿ, ಕರಿಬಾಳೆ ಮತ್ತುG9 ತಳಿಯ ಬಾಳೆಯನ್ನು ಬೆಳೆದಿರುವ ರೈತರು ಮಂಜುನಾಥ ಹೆಗಡೆ (7892957523), ಶ್ರೀವತ್ಸ ಹೆಗಡೆ (9535502274) ಅವರನ್ನು ಸಂಪರ್ಕಿಸಬಹುದು. ಟೆಂಡರ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ, ಕೋವಿಡ್ 19 ತಡೆಗೆ ಅಗತ್ಯವಿರುವ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT