ವಿರಲ ಗ್ರಾಮದ ಸೋಮಾ ಶಂಕರ ಗಾವಡೆ (55) ಗಾಯಗೊಂಡವರು. ಮನೆಯ ಹತ್ತಿರದಲ್ಲೇ ಇರುವ ಗದ್ದೆಯಲ್ಲಿ ದನಗಳನ್ನು ಮೇಯಿಸಿ ಮನೆಗೆ ಮರಳುತ್ತಿದ್ದ ವೇಳೆ ದಾರಿಯ ಹಲಸಿನ ಮರದ ಮೇಲಿದ್ದ ಕರಡಿಯೊಂದು ಅವರ ಮೇಲೆ ಹಾರಿ ದಾಳಿ ಮಾಡಿತು. ಅವರ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬ ಊರ ಜನರ ನೆರವಿನಿಂದ ಗಾಯಗೊಂಡ ವ್ಯಕ್ತಿಯನ್ನು ಕ್ಯಾಸಲ್ ರಾಕ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ. ನಂತರ ಕ್ಯಾಸಲ್ ರಾಕ್ ವಲಯ ಅರಣ್ಯಾಧಿಕಾರಿಯವರ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಅರಣ್ಯ ಇಲಾಖೆಯವರು ದಾಖಲಿಸಿದ್ದಾರೆ.