ಅಪಾಯಕಾರಿ ಅಣುಸ್ಥಾವರದಿಂದ ಈಗಾಗಲೇ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಕೈಗಾದಿಂದ ಸುತ್ತಲಿನ ನೂರಾರು ಕಿ.ಮೀ ಪ್ರದೇಶದಲ್ಲಿ ಕ್ಯಾನ್ಸರ್ ಸಹಿತ ಹಲವು ಅಪಾಯಕಾರಿ ರೋಗಗಳಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಸ್ವತಂತ್ರವಾಗಿ, ಸಮಗ್ರವಾಗಿ ಆರೋಗ್ಯ ಸಮೀಕ್ಷೆ ನಡೆದಿಲ್ಲ. ಕೈಗಾ ಅಣುಸ್ಥಾವರದಿಂದ ವಿಶೇಷವಾಗಿ ಕಾರವಾರ, ಯಲ್ಲಾಪುರ, ಶಿರಸಿ, ಜೊಯಿಡಾ, ಅಂಕೋಲಾ ಭಾಗದ ಜಲಮೂಲಗಳು, ನದಿಗಳು ಮಾಲಿನ್ಯಗೊಂಡು, ಅದರಿಂದ ವ್ಯಾಪಕವಾಗಿ ಜಲಚರಗಳು ಸಾವು ಕಂಡಿವೆ. ಈಗಾಗಲೇ ಇರುವ ನಾಲ್ಕು ಸ್ಥಾವರಗಳಿಂದ ಸಾವಿರಾರು ಎಕರೆ ಪಶ್ಚಿಮಘಟ್ಟದ ಅಮೂಲ್ಯ ಕಾಡುಗಳು ಬಲಿಯಾಗಿವೆ. ಇನ್ನು 5-6 ನೇ ಘಟಕ ನಿರ್ಮಾಣ ಹಾಗೂ ಕೇಬಲ್ ಅಳವಡಿಕೆಗೆ ಮತ್ತೆ ಸಾವಿರಾರು ಎಕರೆ ಕಾಡು ನಾಶವಾಗುವ ಸಾಧ್ಯತೆಯಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.