ಬೆಟ್ಟದ ಮೇಲೆ, ಸುಂದರವಾದ ತಾಣದಲ್ಲಿರುವ ಈ ಕೆರೆಯು ವಿಶಾಲವಾಗಿದ್ದು, 2008ರಲ್ಲಿ ಅಂದಾಜು ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ಕೆರೆಯು ಕೆಳಭಾಗದ ಜನರಿಗೆ ಬಳಕೆಗೆ ಬಾರದಂತಾಗಿದೆ. ಕೆರೆಯಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲು ನಿರ್ಮಿಸಲಾಗಿದ್ದ ಕಾಲುವೆಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದಿವೆ. ಇದರಿಂದ ಬೇಸಿಗೆಯಲ್ಲಿ ನೂರಾರು ಎಕರೆ ಕೃಷಿ ಜಮೀನಿಗೆ ನೀರು ಸಿಗುತ್ತಿಲ್ಲ.