ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ.ಪ್ರಕಾಶ ಮೇಸ್ತ, ‘ರಸ್ತೆ ನಿರ್ಮಾಣಕ್ಕಾಗಿ ಕೆಂಪು ಮಣ್ಣು ಮತ್ತು ಕಲ್ಲನ್ನು ಕಡಲತೀರದಲ್ಲಿ ಸುರಿಯಲಾಗಿದೆ. ಮಳೆಗಾಲದಲ್ಲಿ ದೊಡ್ಡ ಅಲೆಗಳು ಬಂದು ಅವುಗಳನ್ನು ಕೊಚ್ಚಿಕೊಂಡು ಹೋಗಲಿವೆ. ಬಳಿಕ ಕಲ್ಲನ್ನು ಸಮುದ್ರವು ದಡಕ್ಕೆ ತಂದು ಸುರಿಯಲಿದೆ. ರಸ್ತೆಯಿಂದಾಗ ದೂಳು, ವಾಯು ಮಾಲಿನ್ಯ ಉಂಟಾಗಲಿದೆ. ಹಾಗಾಗಿ ಈ ಕಡಲತೀರದಲ್ಲಿ ಈಜುವುದು ಸೂಕ್ತವಾಗದು’ ಎಂದು ಪ್ರತಿಪಾದಿಸಿದರು.