ಬಜೆಟ್ ಪೂರ್ವಭಾವಿಯಾಗಿ ನಗರಸಭೆ ಮಂಗಳವಾರ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ‘ಜನಸಂಖ್ಯೆಗನುಗುಣವಾಗಿ ನೀರಿನ ಬೇಡಿಕೆ ಹೆಚ್ಚುತ್ತಿದೆ. ಆರಂಭದಲ್ಲಿ ಕೆಂಗ್ರೆಹೊಳೆಯನ್ನು ಮಾತ್ರ ಅವಲಂಬಿಸಿದ್ದ ನಗರಸಭೆ, ನಂತರ ಅಗತ್ಯಕ್ಕೆ ತಕ್ಕಂತೆ ಅಘನಾಶಿನಿ ನದಿಯಿಂದ ನಗರಕ್ಕೆ ನೀರು ತರುತ್ತಿದೆ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಕಾರಣ, ಜಲಮೂಲಗಳನ್ನು ಭದ್ರಗೊಳಿಸಿಕೊಳ್ಳಬೇಕಾಗಿದ. ಈ ನಿಟ್ಟಿನಲ್ಲಿ ನಗರಸಭೆ, ಜನರಿಂದ ಸಂಗ್ರಹಿಸುವ ನೀರಿನ ಕರದಲ್ಲಿ ನಿರ್ದಿಷ್ಟ ಮೊತ್ತವನ್ನು ಇವೆರಡು ಜಲಮೂಲಗಳ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಮೀಸಲಿಡಬೇಕು’ ಎಂದರು.