‘ನಾವು ಬಿಎಸ್ಪಿ ನಾಯಕರು. ವಸತಿ ಶಾಲೆಯಲ್ಲಿ ಉಳಿಯಲು ಸಾಧ್ಯವಿಲ್ಲ. ನಮ್ಮನ್ನು ಮನೆಗೆ ಕಳುಹಿಸಿ’ ಎಂದು ಕ್ವಾರಂಟೈನ್ನಲ್ಲಿದ್ದ ಸುಧಾಕರ ಜೋಗಳೇಕರ, ನಾಗಸೇನ ಜೋಗಳೇಕರ ಎಂಬುವವರು ಗಲಾಟೆ ಮಾಡಿದ್ದರು. ಅಲ್ಲದೇ, ಪ್ರಾಚಾರ್ಯರ ಮೇಲೆ ದರ್ಪ ತೋರಿದ್ದರು ಮತ್ತು ಗಂಟಲು ದ್ರವ ಸಂಗ್ರಹಿಸಲು ಬಂದಿದ್ದ ವೈದ್ಯರ ಜೊತೆ ಅಸಹಕಾರ ತೋರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.