ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮ ವಾಸ್ತವ್ಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಜನಸಾಮಾನ್ಯರು ಮನವಿ ಕೊಡಲು ಬಂದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿದ ಮಾತು ಮಾನಸಿಕ ಸ್ಥಿಮಿತ ಕಳೆದುಕೊಂಡು ಹೇಳಿದ್ದಾಗಿದೆ. ಅತ್ತ ಸಿದ್ದರಾಮಯ್ಯ, ‘ನಾವುಇಷ್ಟೆಲ್ಲ ಕೆಲಸ ಮಾಡಿಯೂ ಮೋದಿಗೆ ಮತ ಹಾಕಿದ್ರಿ’ ಎಂದು ಮತದಾರರನ್ನು ಹಂಗಿಸಿದರು. ಯಾರಿಗೆ ಮತ ಕೊಡಬೇಕು ಎಂದು ಮತದಾರರು ನಿರ್ಧಾರ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆಗೌರವ ಕೊಡಬೇಕು ಎಂಬ ಭಾವನೆ ಇಬ್ಬರಲ್ಲೂ ಇಲ್ಲದಿರುವುದು ದುರಂತ’ ಎಂದುಅಭಿಪ್ರಾಯಪಟ್ಟರು.