‘ಕೋವಿಡ್ ಸಂಬಂಧಿತ ಕೆಲಸದಲ್ಲಿ ನಿರತರಾಗಿದ್ದ 17 ಮಂದಿ ಗುತ್ತಿಗೆ ನೌಕರರು ರಾಜ್ಯದಾದ್ಯಂತ ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಪರಿಹಾರ ಕೊಟ್ಟಿಲ್ಲ. ನಮಗೆ ಪಿಂಚಣಿ, ಉತ್ತಮ ವೇತನವಿಲ್ಲ. ಇದರಿಂದ ಹಲವರ ಕುಟುಂಬಗಳು ಬೀದಿ ಪಾಲಾಗಿವೆ. ನಮ್ಮ ಕೆಲಸಕ್ಕೆ ಚಪ್ಪಾಳೆ ಹೊಡೆದಿದ್ದು ಸಾಕು, ಕೋವಿಡ್ ವಿಮೆ ಮಾಡಿಸಿಕೊಡಲು ಸರ್ಕಾರ ಮುಂದಾಗಬೇಕು’ ಎಂದು ಡಾ.ಸುಹಾಸ್ ಆಗ್ರಹಿಸಿದರು.