ಗಣಪತಿ ನಾಯ್ಕ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರದೀಪ ಶೆಟ್ಟಿ, ‘ನಗರ ವ್ಯಾಪ್ತಿಯಲ್ಲಿದ್ದರೂ ಗ್ರಾಮ ಪಂಚಾಯ್ತಿಗೆ ಸೇರಿಕೊಂಡಿರುವ ಕೊಪ್ಪಲ ಕಾಲೊನಿ, ಗುರು ನಗರ ಸೇರಿ ಹಲವು ಪ್ರದೇಶಗಳನ್ನು ನಗರಸಭೆಗೆ ಸೇರಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳುಹಿಸಿಲ್ಲ. ಕೇವಲ ಎರಡು ಪ್ರದೇಶಗಳ ಸೇರ್ಪಡೆಗೆ ಪ್ರಸ್ತಾವ ಕಳಿಸಿದ್ದು ಸರಿಯಲ್ಲ’ ಎಂದರು.