2014ರ ಫೆ.4ರಂದು ಪಟ್ಟಣದಲ್ಲಿ ನಡೆದಿದ್ದ ಅಪಘಾತದಲ್ಲಿ, ಬಾಗಲಕೋಟೆ ಡಿಪೊಗೆ ಸೇರಿದ ಬಸ್, ಬೈಕ್ ಸವಾರ ಗಣಪತಿ ಮೇಸ್ತ ಎಂಬುವವರಿಗೆ ಡಿಕ್ಕಿಯಾಗಿತ್ತು. ಅವರು ಮೃತಪಟ್ಟಿದ್ದರು. ನ್ಯಾಯಾಲಯ ಅದೇಶ ಮಾಡಿದ್ದರೂ ಸಾರಿಗೆ ಸಂಸ್ಥೆಯು ಮೃತರ ಕುಟುಂಬಕ್ಕೆ ಪರಿಹಾರದ ಪೂರ್ತಿ ಹಣವನ್ನು ಪಾವತಿಸಿರಲಿಲ್ಲ. ಹಾಗಾಗಿ ಅದೇ ಡಿಪೊದ ಬಸ್ಸನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.