ಅಳ್ವೆಕೋಡಿಯಲ್ಲಿ ಯಶವಂತ ಕೃಷ್ಣ ಮೊಗೇರ ಎಂಬುವವರ ‘ಹರಿ ಓಂ’ ಎಂಬ ದೋಣಿಯ ಮೂಲಕ ಮೀನು ಹಿಡಿಯಲು ಏಂಡಿ ಬಲೆ ಹಾಕಲಾಗಿತ್ತು. ಬಲೆಯನ್ನು ಎಳೆದು ಮೀನುಗಳನ್ನು ತೆಗೆಯಲು ಮೀನುಗಾರರು ಮುಂದಾದಾಗ ಮೀನಿನೊಂದಿಗೆ ಮೊಸಳೆಯೂ ಪತ್ತೆಯಾಯಿತು. ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ಹಿನ್ನೀರಿನಲ್ಲಿ ಮೊಸಳೆ ಸಮುದ್ರಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ.