‘ಅಘನಾಶಿನಿ ನದಿ ಸಮುದ್ರ ಸೇರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಮುದ್ರ ಅಲೆಗಳ ಅಬ್ಬರ ಜೋರಾಗಿರುತ್ತದೆ. ಬಾರ್ಜ್ ಚಿಕ್ಕದಿರುವುದರಿಂದ ಮಳೆಗಾಲದ ಎರಡು ತಿಂಗಳು ಬಾರ್ಜ್ ಸೌಲಭ್ಯ ಇರುವುದಿಲ್ಲ. ಆಗ ಜನರು ಖಾಸಗಿ ದೋಣಿ ಮೂಲಕ ಅಥವಾ ಕುಮಟಾಕ್ಕೆ ಬಂದು ಅಲ್ಲಿಂದ ಮಿರ್ಜಾನ, ಹಿರೇಗುತ್ತಿ, ಮಾದನಗೇರಿ ಮೂಲಕ ತದಡಿ ತಲುಪಬೇಕಾಗುತ್ತದೆ. ಬಂದರು ಇಲಾಖೆ ಟೆಂಡರ್ ಕರೆದು ಪೂರೈಸಿದ ಬಾರ್ಜ್ ಅನ್ನು ಗುತ್ತಿಗೆದಾರರು ಜನರ ಓಡಾಟಕ್ಕೆ ಬಳಸುತ್ತಿರುವುದು ಅನಿವಾರ್ಯವಾಗಿದೆ’ ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಲಂಬೋದರ ನಾಯ್ಕ ತಿಳಿಸಿದರು.