‘ಕುಂಬಾರಿಕೆ ನಮ್ಮ ಮೂಲ ಕಸುಬು. ತೀರಾ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿತ್ತು. ಮಾರುಕಟ್ಟೆಯ ಸಮಸ್ಯೆಯೂ ಇತ್ತು. ಎರಡು ತಿಂಗಳ ಹಿಂದೆ ನಮ್ಮ ಸಂಘಕ್ಕೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ₹ 75 ಸಾವಿರ ಪ್ರೋತ್ಸಾಹ ಧನ ದೊರಕಿದೆ. ಚೆನ್ನಾಗಿ ವ್ಯಾಪಾರವಾಗುತ್ತಿದ್ದು, ಹೆಚ್ಚಿನ ವಹಿವಾಟಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಜೊಯಿಡಾದ ಲಕ್ಷ್ಮೀ ಸ್ವ-ಸಹಾರ ಸಂಘದ ಸದಸ್ಯೆ ಶೋಭಾ ಸದು ಕುಂಬಾರ್ ಹೇಳಿದರು.