ಶಿರಸಿ: ನಿತ್ಯ ಬೆಳಗಾಗುವಷ್ಟರಲ್ಲಿ ಮನೆಯ ಬಾಗಿಲಿಗೆ ದಿನಪತ್ರಿಕೆಗಳನ್ನು ತಂದು ಕೊಡುವ ಪತ್ರಿಕಾ ಏಜೆಂಟರು, ವಿತರಕರು ಸುರಕ್ಷತೆಯ ದೃಷ್ಟಿಯಿಂದ ಮುಖಗವಸು ಹಾಗೂ ಕೈ ಗ್ಲೌಸ್ ಹಾಕಿ ಪತ್ರಿಕೆಗಳನ್ನು ವಿತರಿಸಲಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದ ಪತ್ರಿಕೆಗಳನ್ನು ಮುಕ್ತವಾಗಿಡಲು, ಪತ್ರಿಕೆಗಳು ಮುದ್ರಣವಾದ ಮೇಲೆ ಪ್ರತಿದಿನ ಸೋಂಕು ನಿವಾರಕಗಳ ಸಿಂಪಡಣೆ ಮಾಡಲಾಗುತ್ತದೆ. ಸುರಕ್ಷಿತವಾಗಿ ಬಂದಿರುವ ಪತ್ರಿಕೆಗಳನ್ನು, ಅಷ್ಟೇ ಸುರಕ್ಷಿತವಾಗಿ ಓದುಗರಿಗೆ ತಲುಪಿಸುವ ಜೊತೆಗೆ, ಸ್ವ ಸುರಕ್ಷೆಯ ದೃಷ್ಟಿಯಿಂದ ವಿತರಕರು ಮಂಗಳವಾರ ಇಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಪತ್ರಿಕೆ ವಿತರಣೆ ಆರಂಭಿಸುವಾಗ ಸ್ಯಾನಿಟೈಸರ್ ಬಳಕೆಯನ್ನು ಅಳವಡಿಸಿಕೊಂಡಿದ್ದಾರೆ.
ಪ್ರಮುಖರಾದ ವಿವೇಕ ರಾಯಕರ, ಮಾರುತಿ ಮಡಿವಾಳ, ರಾಘವೇಂದ್ರ ನಾಯ್ಕ, ಕೃಷ್ಣಮೂರ್ತಿ, ಸತೀಶ ರಾವ್, ವಿವೇಕ ರಾಯಕರ, ಮೋಹನ ನಾಯ್ಕ, ಧಾರೇಶ್ವರ, ಜಗದೀಶ ಕಲ್ಮಠ, ಗಣೇಶ ಪ್ರಭು ಮೊದಲಾದವರು ಈ ವಿಷಯ ಚರ್ಚಿಸಿದರು.