‘ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ₹98 ಸಾವಿರ ಸಾಲ ಪಡೆದು ಭತ್ತ ಬೆಳೆದಿದ್ದರು. ಕುಟುಂಬಕ್ಕೆ ₹1.20 ಲಕ್ಷ ಹಳೆಯ ಸಾಲವಿತ್ತು. ನುಸಿ ರೋಗದಿಂದ ಈ ಬಾರಿ ಬೆಳೆ ಹಾಳಾಗಿತ್ತು. ಇದರಿಂದ ಮನನೊಂದಿದ್ದರು. ಸಾಲ ಮರುಪಾವತಿಯ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಕುಟುಂಬ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.