ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಬ್ದುಲ್ ಕರೀಮ್, ಜುಬೈರ್ ಉಸ್ಮಾನಿ, ಜಲಾಲುದ್ದಿನ್ ಘಾರು, ಅಬ್ದುಲ್ ರಶೀದ್ ಉಸ್ಮಾನಿ, ರಿಯಾಜ್ ಬಂಗಾಲಿ ಹಾಗೂ ಅವರ ಸಂಗಡಿಗರು ಹಿಂತಿರುಗಿ ಬಂದವರು. ಅವರು ಏಳೆಂಟು ವರ್ಷಗಳಿಂದ ಅಬುಧಾಬಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಸದ್ಯದಲ್ಲೇ ಮತ್ತಷ್ಟು ಮೀನುಗಾರರು ಹಿಂತಿರುಗಿ ಬರಲಿದ್ದಾರೆ ಎಂದು ಅವರು ಹೇಳುತ್ತಾರೆ.