<p><strong>ಕಾರವಾರ: </strong>ಡಿಸೆಂಬರ್ ತಿಂಗಳೆಂದರೆ ಮೀನುಗಾರರಿಗೆ ಕೈತುಂಬ ಕೆಲಸ ಇರುವ ಅವಧಿಯೆಂದೇ ಭಾವಿಸಲಾಗುತ್ತದೆ. ಆದರೆ, ಈ ಬಾರಿ ಮತ್ಸ್ಯಕ್ಷಾಮದಿಂದಾಗಿ ಜಿಲ್ಲೆಯ ಸಾವಿರಾರು ಮಂದಿಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ‘ಕಡಲ ಮಕ್ಕಳು’ ಕಂಗಾಲಾಗಿದ್ದಾರೆ.</p>.<p>ಆ.1ರಂದು ಮೀನುಗಾರಿಕಾ ಋತು ಆರಂಭವಾದರೂ ಈ ಬಾರಿ ಹವಾಮಾನ ವೈಪರೀತ್ಯದಿಂದ ಸುಮಾರು 75 ದಿನಗಳಷ್ಟೇ ವಾಡಿಕೆಯಮೀನುಗಾರಿಕೆ ಸಾಧ್ಯವಾಗಿದೆ ಎಂಬ ಅಳಲು ಮೀನುಗಾರರದ್ದಾಗಿದೆ. ಈ ವರ್ಷ ಮೊದಲ ದಿನವೇ ಆಳಸಮುದ್ರದಲ್ಲಿ ಮೀನುಗಳು ಸಿಗದೇ ದೋಣಿಗಳು ಖಾಲಿಯಾಗಿ ವಾಪಸ್ ಬಂದಿದ್ದವು. ಮರುದಿನವೇ ಅಂದರೆ, ಆ.2ರಿಂದ ಆ.16ವರೆಗೆ ಸಮುದ್ರದಲ್ಲಿ ಚಂಡಮಾರುತ ಬೀಸಿದ್ದರಿಂದ ಮೀನುಗಾರಿಕೆ ನಿಲ್ಲಿಸಲಾಗಿತ್ತು. 17ರಿಂದ ಆ.31ರವರೆಗೆ ಪ್ರತಿ ದಿನ ಮತ್ಸ್ಯ ಶಿಕಾರಿ ಸಾಧ್ಯವಾಗಿತ್ತು.</p>.<p>ಸೆ.2ರಂದು ಮತ್ತೆ ಚಂಡಮಾರುತವೆದ್ದ ಪರಿಣಾಮ ದೋಣಿಗಳೆಲ್ಲ ದಡ ಸೇರಿದವು. ನಂತರ ಮೀನುಗಾರಿಕೆ ಆರಂಭವಾಗಿದ್ದು ಸೆ.22ರಂದು. ಆಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಟ್ರೋಲ್ ದೋಣಿಗಳಿಗೆ ತಕ್ಕಮಟ್ಟಿಗೆ ಮೀನು ಸಿಕ್ಕವೇ ಹೊರತು, ಪರ್ಸೀನ್ ಹಾಗೂ ಸಾಂಪ್ರದಾಯಿಕಮೀನುಗಾರರಿಗೆ ನಿರಾಸೆಯಾಗಿತ್ತು.</p>.<p>‘ಬೈತಖೋಲ್ ಬಂದರಿನಲ್ಲಿ ಸುಮಾರು 70 ಟ್ರೋಲ್ ದೋಣಿಗಳಿವೆ. ಅವುಗಳ ಪೈಕಿ 50 ಮೀನುಗಾರಿಕೆಗೆ ಹೋಗುತ್ತಿವೆ. ಡಿಸೆಂಬರ್ ತಿಂಗಳಿನಲ್ಲಿ ಕೂಡ ಮೀನುಗಾರಿಕೆಚೇತರಿಸಿಲ್ಲ. ಸಿಗುವ ಆದಾಯವು ದೋಣಿಯ ಡೀಸೆಲ್ ಖರ್ಚಿಗೆ ಸರಿ ಹೋಗುವಂತಿದೆ’ ಎನ್ನುತ್ತಾರೆ ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ.</p>.<p>‘ಮೀನುಗಾರರಿಗೆ ಆಗಸ್ಟ್ ನಂತರದ ನಾಲ್ಕು ತಿಂಗಳು ಸಿಗುವ ಆದಾಯವೇ ಪ್ರಮುಖವಾಗಿರುತ್ತದೆ. ಟ್ರೋಲ್ ದೋಣಿಯವರಿಗೆ ನಾಲ್ಕೈದುವರ್ಷಗಳಿಂದ ಆಗಸ್ಟ್ ತಿಂಗಳ ಮೊದಲ 15 ದಿನ ಹಾಗೂ ಡಿಸೆಂಬರ್ಕೊನೆಯಿಂದ ಮಾರ್ಚ್ವರೆಗೆಸಾಕಷ್ಟುಮೀನು ಸಿಗುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ’ ಎಂದು ವಿವರಿಸಿದರು.</p>.<p>‘ಈಗ ಟ್ರೋಲ್ ದೋಣಿಗಳು ಆಳಸಮುದ್ರಕ್ಕೆ ಹೋಗುತ್ತಿವೆ. ಆದರೆ, ಉದ್ಯಮವು ಲಾಭದಾಯಕಸ್ಥಿತಿಯಲ್ಲಿ ಖಂಡಿತ ಇಲ್ಲ. ಮಾರುಕಟ್ಟೆಯಲ್ಲಿ ಕೂಡ ಮೀನಿನ ದರ ಏರಿಳಿತ ಕಾಣುತ್ತಿದೆ. ಸದ್ಯ ಪ್ರತಿ ಕೆ.ಜಿ ಲೆಪ್ಪೆಗೆ ₹ 50ರ ಆಸುಪಾಸಿನಲ್ಲಿದೆ. ಮೊದಲು ₹ 100ರಂತೆ ಸಿಗುತ್ತಿತ್ತು. ಈ ಸಂದರ್ಭದಲ್ಲಿ ಸೆಟ್ಲೆ ಮೀನುಗಳೇ ಹೆಚ್ಚು ಸಿಗುತ್ತಿದ್ದು, ಇತರ ಪ್ರಭೇದಗಳು ಕಡಿಮೆಯಾಗಿವೆ’ ಎಂದು ಹೇಳಿದರು.</p>.<p class="Subhead">ನಿರ್ವಹಣೆ ಬಲು ದುಬಾರಿ:‘ಒಂದು ಪರ್ಸೀನ್ ದೋಣಿಯ ದಿನವೊಂದರ ನಿರ್ವಹಣೆಗೆ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಸಿಬ್ಬಂದಿಯ ವೇತನ, ಊಟ, ತಿಂಡಿ ಮುಂತಾದ ಮೂಲ ಅವಶ್ಯಕತೆಗಳ ಪೂರೈಕೆಗೇ ₹ 6 ಸಾವಿರ ಬೇಕು. ಈ ದೋಣಿಗೆ ದಿನವೊದಕ್ಕೆ ಸುಮಾರು 300 ಲೀಟರ್ ಡೀಸೆಲ್ ಬೇಕು. ಈ ವೆಚ್ಚವನ್ನೂ ಪ್ರತ್ಯೇಕವಾಗಿ ಸೇರಿಸಿದಾಗ ಈಗಿನ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಬಹಳ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಮೀನುಗಾರ ಮುಖಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಡಿಸೆಂಬರ್ ತಿಂಗಳೆಂದರೆ ಮೀನುಗಾರರಿಗೆ ಕೈತುಂಬ ಕೆಲಸ ಇರುವ ಅವಧಿಯೆಂದೇ ಭಾವಿಸಲಾಗುತ್ತದೆ. ಆದರೆ, ಈ ಬಾರಿ ಮತ್ಸ್ಯಕ್ಷಾಮದಿಂದಾಗಿ ಜಿಲ್ಲೆಯ ಸಾವಿರಾರು ಮಂದಿಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ‘ಕಡಲ ಮಕ್ಕಳು’ ಕಂಗಾಲಾಗಿದ್ದಾರೆ.</p>.<p>ಆ.1ರಂದು ಮೀನುಗಾರಿಕಾ ಋತು ಆರಂಭವಾದರೂ ಈ ಬಾರಿ ಹವಾಮಾನ ವೈಪರೀತ್ಯದಿಂದ ಸುಮಾರು 75 ದಿನಗಳಷ್ಟೇ ವಾಡಿಕೆಯಮೀನುಗಾರಿಕೆ ಸಾಧ್ಯವಾಗಿದೆ ಎಂಬ ಅಳಲು ಮೀನುಗಾರರದ್ದಾಗಿದೆ. ಈ ವರ್ಷ ಮೊದಲ ದಿನವೇ ಆಳಸಮುದ್ರದಲ್ಲಿ ಮೀನುಗಳು ಸಿಗದೇ ದೋಣಿಗಳು ಖಾಲಿಯಾಗಿ ವಾಪಸ್ ಬಂದಿದ್ದವು. ಮರುದಿನವೇ ಅಂದರೆ, ಆ.2ರಿಂದ ಆ.16ವರೆಗೆ ಸಮುದ್ರದಲ್ಲಿ ಚಂಡಮಾರುತ ಬೀಸಿದ್ದರಿಂದ ಮೀನುಗಾರಿಕೆ ನಿಲ್ಲಿಸಲಾಗಿತ್ತು. 17ರಿಂದ ಆ.31ರವರೆಗೆ ಪ್ರತಿ ದಿನ ಮತ್ಸ್ಯ ಶಿಕಾರಿ ಸಾಧ್ಯವಾಗಿತ್ತು.</p>.<p>ಸೆ.2ರಂದು ಮತ್ತೆ ಚಂಡಮಾರುತವೆದ್ದ ಪರಿಣಾಮ ದೋಣಿಗಳೆಲ್ಲ ದಡ ಸೇರಿದವು. ನಂತರ ಮೀನುಗಾರಿಕೆ ಆರಂಭವಾಗಿದ್ದು ಸೆ.22ರಂದು. ಆಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಟ್ರೋಲ್ ದೋಣಿಗಳಿಗೆ ತಕ್ಕಮಟ್ಟಿಗೆ ಮೀನು ಸಿಕ್ಕವೇ ಹೊರತು, ಪರ್ಸೀನ್ ಹಾಗೂ ಸಾಂಪ್ರದಾಯಿಕಮೀನುಗಾರರಿಗೆ ನಿರಾಸೆಯಾಗಿತ್ತು.</p>.<p>‘ಬೈತಖೋಲ್ ಬಂದರಿನಲ್ಲಿ ಸುಮಾರು 70 ಟ್ರೋಲ್ ದೋಣಿಗಳಿವೆ. ಅವುಗಳ ಪೈಕಿ 50 ಮೀನುಗಾರಿಕೆಗೆ ಹೋಗುತ್ತಿವೆ. ಡಿಸೆಂಬರ್ ತಿಂಗಳಿನಲ್ಲಿ ಕೂಡ ಮೀನುಗಾರಿಕೆಚೇತರಿಸಿಲ್ಲ. ಸಿಗುವ ಆದಾಯವು ದೋಣಿಯ ಡೀಸೆಲ್ ಖರ್ಚಿಗೆ ಸರಿ ಹೋಗುವಂತಿದೆ’ ಎನ್ನುತ್ತಾರೆ ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ.</p>.<p>‘ಮೀನುಗಾರರಿಗೆ ಆಗಸ್ಟ್ ನಂತರದ ನಾಲ್ಕು ತಿಂಗಳು ಸಿಗುವ ಆದಾಯವೇ ಪ್ರಮುಖವಾಗಿರುತ್ತದೆ. ಟ್ರೋಲ್ ದೋಣಿಯವರಿಗೆ ನಾಲ್ಕೈದುವರ್ಷಗಳಿಂದ ಆಗಸ್ಟ್ ತಿಂಗಳ ಮೊದಲ 15 ದಿನ ಹಾಗೂ ಡಿಸೆಂಬರ್ಕೊನೆಯಿಂದ ಮಾರ್ಚ್ವರೆಗೆಸಾಕಷ್ಟುಮೀನು ಸಿಗುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ’ ಎಂದು ವಿವರಿಸಿದರು.</p>.<p>‘ಈಗ ಟ್ರೋಲ್ ದೋಣಿಗಳು ಆಳಸಮುದ್ರಕ್ಕೆ ಹೋಗುತ್ತಿವೆ. ಆದರೆ, ಉದ್ಯಮವು ಲಾಭದಾಯಕಸ್ಥಿತಿಯಲ್ಲಿ ಖಂಡಿತ ಇಲ್ಲ. ಮಾರುಕಟ್ಟೆಯಲ್ಲಿ ಕೂಡ ಮೀನಿನ ದರ ಏರಿಳಿತ ಕಾಣುತ್ತಿದೆ. ಸದ್ಯ ಪ್ರತಿ ಕೆ.ಜಿ ಲೆಪ್ಪೆಗೆ ₹ 50ರ ಆಸುಪಾಸಿನಲ್ಲಿದೆ. ಮೊದಲು ₹ 100ರಂತೆ ಸಿಗುತ್ತಿತ್ತು. ಈ ಸಂದರ್ಭದಲ್ಲಿ ಸೆಟ್ಲೆ ಮೀನುಗಳೇ ಹೆಚ್ಚು ಸಿಗುತ್ತಿದ್ದು, ಇತರ ಪ್ರಭೇದಗಳು ಕಡಿಮೆಯಾಗಿವೆ’ ಎಂದು ಹೇಳಿದರು.</p>.<p class="Subhead">ನಿರ್ವಹಣೆ ಬಲು ದುಬಾರಿ:‘ಒಂದು ಪರ್ಸೀನ್ ದೋಣಿಯ ದಿನವೊಂದರ ನಿರ್ವಹಣೆಗೆ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಸಿಬ್ಬಂದಿಯ ವೇತನ, ಊಟ, ತಿಂಡಿ ಮುಂತಾದ ಮೂಲ ಅವಶ್ಯಕತೆಗಳ ಪೂರೈಕೆಗೇ ₹ 6 ಸಾವಿರ ಬೇಕು. ಈ ದೋಣಿಗೆ ದಿನವೊದಕ್ಕೆ ಸುಮಾರು 300 ಲೀಟರ್ ಡೀಸೆಲ್ ಬೇಕು. ಈ ವೆಚ್ಚವನ್ನೂ ಪ್ರತ್ಯೇಕವಾಗಿ ಸೇರಿಸಿದಾಗ ಈಗಿನ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಬಹಳ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಮೀನುಗಾರ ಮುಖಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>