ನಗರದಲ್ಲಿ ಹೀಗಾದರೆ, ಗ್ರಾಮೀಣ ಪ್ರದೇಶದ ಜನರಿಗೆ ಈ ವರ್ಷದ ಮೊದಲ ಚಳಿ ಅನುಭವಕ್ಕೆ ಬಂತು. ಡೇರಿಗೆ ಹಾಲು ಕೊಡಲು ಹೋಗುವವರು, ತೋಟಕ್ಕೆ ಹೋಗುವವರು ಮೈಗಪ್ಪಳಿಸುವ ತಣ್ಣನೆ ಗಾಳಿಗೆ ಮುದುಡಿದರು. ‘ಬೆಳಿಗ್ಗೆ ಹಾಲು ಕರೆಯಲು ಹೋಗುವಾಗ ಕೈಯಲ್ಲಿ ನೀರಿನ ಚೊಂಬು ಹಿಡಿದರೆ, ಐಸ್ ಹಿಡಿದಂತೆ ಆಗುತ್ತಿತ್ತು. ಮುದುಕರು ಬೆಂಕಿ ಕಾಯಿಸಿದ ಮೇಲೆ ಕೊಂಚ ನಿರಾಳರಾದರೂ, ಬಿಸಿಲು ಬಂದ ಮೇಲೆ ನಿಟ್ಟುಸಿರು ಬಿಟ್ಟರು’ ಎಂದರು ತಾರಗೋಡಿನ ಸುರೇಶ.