ಹತ್ತು ದಿನಗಳ ಪೂಜೆಯ ಬಳಿಕ ವಿನಾಯಕನ ವಿಗ್ರಹಗಳನ್ನು ರವೀಂದ್ರನಾಥ ಟ್ಯಾಗೋರ್ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ, ಕಾಳಿ ರಿವರ್ ಗಾರ್ಡನ್ ಬಳಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಕೆ.ಇ.ಬಿ ರಸ್ತೆ, ಸವಿತಾ ಹೋಟೆಲ್ ವೃತ್ತ, ಗ್ರೀನ್ ಸ್ಟ್ರೀಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.